ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 1

ನರಕವಾಸಿಗಳ ಆಹಾರವೇನು ?

ಕುರಾನ್ ಯಾವ ರೀತಿಯ ಪವಿತ್ರ ಪುಸ್ತಕ ಎಂದು ನನಗೆ ತಿಳಿಯುತ್ತಿಲ್ಲ. ಅದರ ಬೋಧನೆಗಳಲ್ಲೇ ಪರಸ್ಪರ ವಿರೋಧಾಭಾಸಗಳು, ಗೊಂದಲಗಳು, ಅಂತರ್ವಿರೋಧಗಳು, ತಪ್ಪುಗಳು, ತೊಡಕುಗಳಿವೆ.

ಕುರಾನ್ ನರಕವಾಸಿಗಳ ಆಹಾರದ ಕುರಿತಾಗಿ ಒಂದು ಕಡೆ ಹೀಗೆ ಹೇಳುತ್ತದೆ: ಅಲ್ ಗಾಶಿಯಾ(88).6- ಲೈಸ ಲಹುಮ್ ತ’ಅಮುನ್ ಇಲ್ಲಾ ಮಿನ್ ದರೀ’——ಮುಳ್ಳಿನ ಗಿಡದ ಹೊರತು ಬೇರೆ ಯಾವ ಆಹಾರವೂ ಅವರಿಗೆ(ನರಕವಾಸಿಗಳಿಗೆ) ಸಿಗದು.

ಈ ಆಯತಿನಲ್ಲಿ ಹೇಳಿರುವಂತೆ ನರಕವಾಸಿಗಳ ಆಹಾರ “ಕೇವಲ ಮುಳ್ಳಿನ ಗಿಡ ಮಾತ್ರ”. ಇದರ ಹೊರತು ಮತ್ಯಾವ ಆಹಾರವೂ ಅವರಿಗೆ ಇರುವುದಿಲ್ಲ. ಎಂದು ಸ್ಪಷ್ಟವಾಗಿ ಹೇಳಿದೆ.

ಆದರೆ ಮತ್ತೊಂದು ಕಡೆ ಇದಕ್ಕೆ ವಿರುದ್ಧವಾಗಿ ಹೀಗೆ ಹೇಳುತ್ತದೆ;

ಅಲ್ ಹಾಕ್ಕಃ(69).36- ವಲಾ ತ’ಅಮುನ್ ಇಲ್ಲಾ ಮಿನ್ ಗಿಸ್ಲೀನ್—– ಕೀವಿನ ಹೊರತು ಬೇರೆ ಯಾವ ಆಹಾರವೂ ಅವನಿಗೆ(ನರಕವಾಸಿಗೆ) ದಕ್ಕದು. ಮುಳ್ಳಿನ ಗಿಡದ ಹೊರತು ಮತ್ಯಾವ ಆಹಾರವೂ ನರಕವಾಸಿಗಳಿಗೆ ಇಲ್ಲ ಎಂಬ ಕುರಾನಿನ ಒಂದು ಆಯತು ಹೇಳಿರುವಾಗ ಈ ಆಯತಿನಲ್ಲಿ “ಕೀವಿನ ಹೊರತು ಬೇರೆ ಯಾವ ಆಹಾರವೂ ಅವನಿಗೆ ದಕ್ಕದು” ಎಂದು ಹೇಳುತ್ತಿದೆ. ಇಂತಹ ವಿರೋಧಭಾಸ(contradiction)ಗಳು, ತಪ್ಪುಗಳು ಕುರಾನಿನಲ್ಲಿ ಸಾಕಷ್ಟು ಸಿಗುತ್ತವೆ. ಆದ್ದರಿಂದಲೇ ಇದು ಮನುಷ್ಯಕೃತ ಪುಸ್ತಕ.

ಇದಲ್ಲದೆ ಕುರಾನಿನ ಮತ್ತೊಂದು ಕಡೆ ಇದಕ್ಕೆ ವಿರೋಧವಾಗಿ ಹೀಗೆ ಹೇಳುತ್ತದೆ;

ಅದ್ದುಖಾನ್(44).43-44 ಇನ್ನ ಶ್ಯಜರತಝ್ ಝಕ್ಕೂಮ್ ತ’ಆಮುಲ್ ಅಸೀಮ್—-ಖಂಡಿತವಾಗಿಯೂ, ಝಕ್ಕೂಮ್ ಮರ,ಅದುವೇ ಪಾಪಿಗಳ ಆಹಾರವಾಗಿರುವುದು. ಅಲ್ ವಾಕಿಅಃ (56)51-53—-ಆ ಬಳಿಕ ಓ ದಾರಿಗೆಟ್ಟ ಧಿಕ್ಕಾರಿಗಳೇ, ನೀವು,‘ಝಕ್ಕೂಮ್’ ಮರದ ಭಾಗವನ್ನು ತಿನ್ನಬೇಕಾಗುವುದು. ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಾಗುವುದು.

ಅಸ್ಸಾಫ್ಫಾತ್(37).62-66 ಫಇನ್ನಹುಮ್ ಲಾಕಿಲೂನಾ ಮಿನ್ಹಾ ಫಮಾಲಿನಾ ಮಿನ್ಹಾ ಅಲ್ಬುತೂನ್ —– ಈ ಆತಿಥ್ಯ ಉತ್ತಮವೋ ಅಥವಾ ‘ಝಕ್ಕೂಮ್’ ಮರವೋ ? ಅದು ನರಕದ ತಳದಿಂದ ಬೆಳೆಯುವ ಮರ. ಅದರ ಗೆಲ್ಲುಗಳು ಶೈತಾನರ ತಲೆಗಳಂತಿರುವವು. ಅವರು (ನರಕವಾಸಿಗಳು) ಖಂಡಿತ ಅದನ್ನೇ ತಿನ್ನುವರು ಮತ್ತು ಅದರಿಂದಲೇ ತಮ್ಮ ಹೊಟ್ಟೆ ತುಂಬುವರು(ಕೆಲವರು ಇದನ್ನು ತಿಹಾಮ ಪ್ರದೇಶದಲ್ಲಿ ಬೆಳೆಯುವ ದುರ್ಗಂಧಯುಕ್ತ ಮತ್ತು ಉಗ್ರವಿಷವುಳ್ಳ ಒಂದು ಸಸ್ಯಕ್ಕೆ ಝಕ್ಕೂಮ್ ಎಂದು ವ್ಯಾಖ್ಯಾನಿಸಿದ್ದಾರೆ) ಈ ಆಯತುಗಳು ಮೇಲಿನ ಎರಡು ಆಯತುಗಳನ್ನು ವಿರೋಧಿಸಿ ನರಕವಾಸಿಗಳ ಆಹಾರ ಮುಳ್ಳಿನ ಗಿಡವೂ ಅಲ್ಲ, ಕಿವೂ ಅಲ್ಲ, ನರಕವಾಸಿಗಳ ಆಹಾರ ಝಕ್ಕೂಮ್ ಮರ, ಅದರಿಂದಲೇ ನರಕವಾಸಿಗಳ ಹೊಟ್ಟೆ ತುಂಬುತ್ತದೆ ಎಂದು ಹೇಳುತ್ತಿದೆ.

ಒಂದು ಆಯತು ನರಕವಾಸಿಗಳ ಆಹಾರ ದರೀ(ಮುಳ್ಳಿನ ಗಿಡ) ಎಂದು ಹೇಳಿದರೆ ಮತ್ತೊಂದು ಆಯತು ಇಲ್ಲ ಇಲ್ಲ ನರಕವಾಸಿಗಳ ಆಹಾರ ಅದಲ್ಲ ಅವರ ಆಹಾರ ಕೀವು ಎಂದು ಹೇಳುತ್ತಿದೆ. ಮತ್ತೇರಡು ಆಯತುಗಳು ಅವೆರಡರೂ ಸುಳ್ಳು ಅವರ ಆಹಾರ ಝುಕ್ಕೂಮ್ ಮರ ಎಂದು ಹೇಳುತ್ತಿದೆ. ದರೀ ಗಿಸ್ಲೀನ್ಝಕ್ಕೂಮ್ಯಾವುದು ನರಕವಾಸಿಗಳ ನಿಜವಾದ ಆಹಾರ? ಮೂರೂ ಎಂದು ಹೇಳುವಂತಿಲ್ಲ ಏಕೆಂದರೆ ಪ್ರತಿ ಆಯತ್ತಿನಲ್ಲೂ ಅದೊಂದೇ ವಸ್ತುವನ್ನು ಮಾತ್ರ ನರಕವಾಸಿಗಳ ಆಹಾರ ಎಂದಿದೆ.

Similar Posts

  • ಕುರಾನ್ 2.223 ರ ವ್ಯಾಖ್ಯಾನ

    ವಿಗ್ರಹಾರಾಧಕರಾಗಿದ್ದ ಅನ್ಸಾರ್‌ಗಳು(ಮದೀನಾದ ಪೈಗಂಬರ್ ಅನುಯಾಯಿಗಳು) ಮತ್ತು ಅಹ್ಲುಲ್‌ ಕಿತಾಬ್‌ಗಳಾದ ಯಹೂದರು ಜೊತೆಯಾಗಿ ಮದಿನಾದಲ್ಲಿ ವಾಸಿಸುತ್ತಿದ್ದರು. ಯಹೂದರು ತಮಗಿಂತ ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆಂದು ಅನ್ಸಾರ್‌ಗಳು ನಂಬಿದ್ದರು. ಹಾಗಾಗಿ ಅವರ ಅನೇಕ ಆಚಾರ ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು. ಯಹೂದಿಯರ ಪ್ರಕಾರ ಪತ್ನಿಯರನ್ನು ಅವಳ ಯೋನಿಗೆ ಅವಳ ಹಿಂಭಾಗದಿಂದ(dogy style ನಲ್ಲಿ) ಸಂಭೋಗಿಸಿದರೆ ಮೆಳ್ಳೆಗಣ್ಣಿನ ಮಗು ಹುಟ್ಟುತ್ತದೆ ಎಂಬ ನಂಬಿಕೆ ಹೊಂದಿದ್ದರು. ಹಾಗಾಗಿ ಒಂದು ಕೋನದಿಂದ ಮಾತ್ರ ಸಂಭೋಗಿಸುತಿದ್ದರು. ಅಂದರೆ ಆಕೆಯನ್ನು ಅಂಗಾತಮಲಗಿಸಿ ಆಕೆಯನ್ನು ಸಂಪೂರ್ಣ ಮರೆಮಾಚುವ ವಿಧದಲ್ಲಿ ಆಕೆಯ ಮೇಲೆ…

  • ಕುರಾನ್ ಹುಟ್ಟಿದ ಕಥೆ; ಭಾಗ 3

    ಕುರಾನ್ – ನಡೆದು ಬಂದ ಹಾದಿ – ಚರಿತ್ರೆ ಕಳೆದ ಭಾಗದಲ್ಲಿ ಕುರಾನು ಬದಲಾಗದೆಂದು ಹೇಳುವ ಮುಸ್ಲಿಮರ ನಂಬಿಕೆ ಆಧಾರಹೀನ ಮತ್ತು ತರ್ಕಹೀನವಾದದ್ದು ಎಂದು ಮತ್ತು ಕುರಾನಿನ ಮೂಲ, ಅದರ ಸಂಕಲನ, ಅದರಲ್ಲಿನ ಲೋಪದೋಷಗಳು, ಕುರಾನ್ ಸಿದ್ಧವಾಗುವಾಗ ಆದ ಯಡವಟ್ಟು ಗಳನ್ನು ನೋಡಿದ್ದೇವೆ. ಈಗ ಕುರಾನ್ ಬದಲಾಗಿದೆ ಎಂದು ಸಿದ್ಧವಾದ ಮೇಲೆ ಅದರ ಇತಿಹಾಸವನ್ನು ಕುರಿತು ಒಂದಷ್ಟು ಒಳನೋಟಗಳನ್ನು ಪಡೆದುಕೊಳ್ಳೋಣ. ಹದೀಸುಗಳ ಆಧಾರದಲ್ಲಿ ಕುರಾನ್ ಬದಲಾಗುತ್ತಾ ಬಂದ ಬಗೆಯನ್ನು ಮತ್ತು ವಿವಿಧ ಭಾಗಗಳ ಜನರು ಬಳಸುತ್ತಿರುವ ಕುರಾನಿನಲ್ಲಿ…

  • ಗುಹಾಂತರದ ಕಥಾಂತರ; ಗುಡಿಸಿ ಗುಂಡಾಂತರ ಮಾಡಿದ ಕುರಾನ್.

    ಗುಹೆಯ ಗೆಳೆಯರ ನಿದ್ರೆ, ಗಂಡಾಗುಂಡಿ ಕುರಾನ್ ಮುದ್ರೆ: ಕಬ್ಜಾ ಮಾಡುವುದರಲ್ಲಿ ಕುರಾನ್ ಎತ್ತಿದ ಕೈ ಎಂದು ಈಗಾಗಲೇ ಹಲವು ಉದಾಹರಣೆಗಳನ್ನು ನೋಡಿಬಿಟ್ಟಿದ್ದೇವೆ. ಆದರೂ ಮೊಮಿನರು ತಮ್ಮ ಈ ಸೌದಿಯ ದೋ ನಂಬ್ರಿ ಮತವು ಕಬ್ಜಾ ಮಾಡಿದ ಕೌದಿ ಎಂಬುದನ್ನು ನಂಬುವುದಕ್ಕೆ ಸಿದ್ಧರೇ ಇಲ್ಲ. ಹಾಗಾಗಿ ಈಗ 2 ಅಥವಾ ಮೂರನೇ ಶತಮಾನದ ಕ್ರೈಸ್ತರ ಕಥೆಯೊಂದನ್ನು ಅಲ್ಲಾಹ ಮತ್ತು ಆತನ ಬಂದಾ ಮಹಮ್ಮದ್ ಹೇಗೆ ಕಬ್ಜಾ ಮಾಡಿ ಕುರಾನಿಗೆ ಸೇರಿಸಿದ್ದಾರೆ ಎಂಬುದನ್ನು ನೋಡೋಣ. ಕುರಾನಿನಲ್ಲಿ ಈ ಕಥೆ 18ನೇ…

  • |

    DEBUNKING OF “ಕುರಾನ್ ಭ್ರೂಣಶಾಸ್ತ್ರ “

    ಅಧ್ಯಾಯ 3: ಆಲಿ ಇಮ್ರಾನ್ (ಇಮ್ರಾನರ ಸಂತತಿ)ಸೂಕ್ತ : 7 “ಅವನೇ, ಈ ಗ್ರಂಥವನ್ನು ನಿಮಗೆ ಇಳಿಸಿಕೊಟ್ಟವನು. ಇದರಲ್ಲಿ ಖಚಿತ ವಚನಗಳಿವೆ – ಅವುಗಳೇ ಈ ಗ್ರಂಥದ ಸಾರ. ಇನ್ನು, ಇದರಲ್ಲಿ ಬಹು ಅರ್ಥದ ವಚನಗಳೂ ಇವೆ. ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು, ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ. ನಿಜವಾಗಿ, ಅವುಗಳ ಸರಿಯಾದ ವ್ಯಾಖ್ಯಾನವನ್ನು ಬಲ್ಲವನು ಅಲ್ಲಾಹನ ಹೊರತು…

  • ಕುರಾನಿನ ತರ್ಕಶೂನ್ಯ ಆಯತುಗಳು.

    ಕುರಾನ್ ಆಯತುಗಳು ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲ. ಒಂದು ಕಡೆ; “ಕುರಾನ್ 16.98—ನೀವು ಕುರ್‌ಆನ್‌ಅನ್ನು ಓದುವಾಗ, ಶಪಿತ ಶೈತಾನನ ವಿರುದ್ಧ ಅಲ್ಲಾಹನ ರಕ್ಷಣೆಯನ್ನು ಬೇಡಿರಿ.” ಎಂದು ಹೇಳಿದರೆ ಅದರ ನಂತರದ ಆಯತ್ತಿನಲ್ಲೇ ಹೀಗೆ ಹೇಳುತ್ತದೆ; ಕುರಾನ್ 16.99—ವಿಶ್ವಾಸಿಗಳ ಮೇಲೆ ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಇಟ್ಟಿರುವವರ ಮೇಲೆ ಆತನಿಗೆ (ಶೈತಾನನಿಗೆ) ಖಂಡಿತ ಯಾವ ನಿಯಂತ್ರಣವೂ ಇಲ್ಲ. ಮೊಮಿನಗಳ ಮೇಲೆ ಶೈತಾನನ ಯಾವ ಆಟವೂ ನಡೆಯುವುದಿಲ್ಲ ಎಂದಾದ ಮೇಲೆ ಅವರು ಕುರಾನ್ ಓದುವ ಮೊದಲು ಅವನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುವ ಅವಶ್ಯಕತೆಯಾದರೂ…

  • ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 2

    ಕುರಾನಿನಲ್ಲಿರುವ ದ್ವಂದ್ವಗಳು, ವೈರುಧ್ಯಗಳು, ವಿರೋಧಾಭಾಸಗಳು, ತಪ್ಪುಗಳು ಮತ್ತು ಅತಾರ್ಕಿಕಕ ವಿಷಯಗಳನ್ನೆಲ್ಲಾ ತೆಗೆದು ಹಾಕಿದರೆ ಕುರಾನಿನಲ್ಲಿ ಏನು ಉಳಿದಿರುತ್ತದೆ ? ಬಹುಶಃ ಇವುಗಳ ಹೊರತಾಗಿ ಕುರಾನೇ ಇರುವುದಿಲ್ಲ. ಏಕೆಂದರೆ ಇವೆಲ್ಲವುಗಳಿಂದ ತುಂಬಿರುವುದೇ ಕುರಾನ್. ಅಲ್ಲಾಹನ ಹೊರತಾಗಿ ಬೇರೆ ಯಾವ ನ್ಯಾಯಾಧೀಶನಾಗಲಿ, ತೀರ್ಪುಗಾರನಾಗಲಿ ಇಲ್ಲ ಮತ್ತು ಆತ ತನ್ನ ನಿರ್ಧಾರ ಅಥವಾ ಆಡಳಿತದಲ್ಲಿ ಯಾರನ್ನೂ ಪಾಲುದಾರಾನನ್ನಾಗಿ ಮಾಡಲು ಅವನು ಅನುಮತಿಸುವುದಿಲ್ಲ ಎಂದು ಕುರಾನ್ ಈ ಆಯತುಗಳಲ್ಲಿ ಹೇಳುತ್ತದೆ; ಅಲ್ ಅನ್‌ಆಮ್(6).114—‘‘ಅವನು (ಅಲ್ಲಾಹನು) ಸವಿಸ್ತಾರವಾದ ಗ್ರಂಥವನ್ನು ನಿಮ್ಮೆಡೆಗೆ ಇಳಿಸಿಕೊಟ್ಟಿರುವಾಗ, ನಾನೇನು ಅಲ್ಲಾಹನನ್ನು…

Leave a Reply

Your email address will not be published. Required fields are marked *