ಅಲ್ಲಾಹನಿಂದ ಮೋಸಹೋದ ಇಬ್ಲೀಸನ ಕಥೆ(ಕುರಾನ್ 15.39)

ಕುರಾನ್.15:39 ರ ಈ ಆಯತ್ , ಸರ್ವಶಕ್ತನಾದ ಅಲ್ಲಾಹನ ಮುಖಾಮುಖಿಯಾಗಿ ನಿಂತ ಕ್ಷುಲ್ಲಕ ಜೀವಿಯಾದ ಇಬ್ಲೀಸ್, ಸೃಷ್ಟಿಕರ್ತನಾದ ದೇವರ ವಿರುದ್ಧವೇ ನೇರ ಆರೋಪ ಮಾಡುತ್ತಿರುವ ಆಯತಾಗಿದೆ! ಮತ್ತು ಕುರಾನಿನ 6236 ಆಯತ್ ಗಳಲ್ಲಿ ಎಲ್ಲಿಯೂ ಕೂಡ ದೇವರು ,ಇಬ್ಲೀಸ್ ಮಾಡಿದ ಈ ಗಂಭೀರ ಆರೋಪವನ್ನು ನಿರಾಕರಿಸಿಲ್ಲ ಎಂಬುದು ಗಮನಾರ್ಹವಾಗಿದೆ!!

ಇಬ್ಲೀಸ್ ಅಲ್ಲಾಹನಿಗೆ ಹೇಳಿರುವುದು “قَالَ رَبِّ بِمَآ اَغْوَيْتَنِيْ—ನೀನು ನನ್ನನ್ನು *ದಾರಿಗೆಡಿಸಿರುವಂತೆಯೇ* (you have put me in error )ಎಂದಾಗಿದೆ. ಅಂದರೆ ಇಬ್ಲೀಸನನ್ನು ದಾರಿಗೆಡಿಸಿರುವುದು ಅಲ್ಲಾಹು ಎಂದು ಆತ ನೇರ ಆರೋಪ ಮಾಡುತ್ತಾನೆ. ಅಲ್ಲಾಹನು ಈ ಅಧ್ಯಾಯದಲ್ಲಿ ಆಗಲಿ, ಉಳಿದ ಅಧ್ಯಾಯಗಳಲ್ಲಾಗಲೀ “ನಿನ್ನನ್ನು ದಾರಿಗೆಡಿಸಿರುವುದು ನಾನಲ್ಲ” ಎಂದು ನಿರಾಕರಿಸಿದ ಒಂದೇ ಒಂದು ಆಯತ್ ಇಲ್ಲ!
ಬದಲಿಗೆ ಅಲ್ಲಾಹ ಬಹುದೊಡ್ಡ ಮೊಸಗಾರ ಎಂದು ಸ್ವತಃ ಕುರಾನ್ 3.54ರಲ್ಲಿ ಹೇಳಲಾಗಿದೆ.

ಹಾಗಾದರೆ ಇಲ್ಲಿ ಇಬ್ಲೀಸ್ ಮಾಡಿರುವ ಆರೋಪವೇನು ? ಅದರ ಹಿನ್ನೆಲೆ ಏನು, ನೋಡೋಣ.

ಅಲ್ಲಾಹನು ಆದಮರನ್ನು ಸೃಷ್ಟಿಸಿರುವುದು, ಆದಮರ ಮುಂದೆ ಸಾಷ್ಟಾಂಗವೆರಗಲು ಮಲಕುಗಳಿಗೆ ಸೂಚಿಸುವುದು ನಮಗೆಲ್ಲ ಗೊತ್ತಿದೆ.(ಯಾಕೆಂದರೆ ಈ ಒಂದು ಕಥೆಯೇ ಕುರಾನಿನಲ್ಲಿ ಸುಮಾರು 6-7 ಅಧ್ಯಾಯಗಳಲ್ಲಿ ಪುನರಾವರ್ತನೆಯಾಗಿದೆ) ಎಲ್ಲಾ ಮಲಕುಗಳೂ ಸಾಷ್ಟಾಂಗವೆರಗುತ್ತಾರೆ, ಇಬ್ಲೀಸ್ ಒಬ್ಬನನ್ನು ಹೊರತುಪಡಿಸಿ. ಯಾಕೆಂದರೆ ಇಬ್ಲೀಸ್ ಮಲಕ್ ಅಲ್ಲ; ಆತ ಜಿನ್ ವರ್ಗಕ್ಕೆ ಸೇರಿದವನಾಗಿದ್ದಾನೆ (ಕುರಾನ್ 18:50).
(ಉದಾಹರಣೆಗೆ,ಆರೋಗ್ಯ ಇಲಾಖೆಗೆ ಸೇರಿದ ಸದಸ್ಯರೆಲ್ಲರೂ ಈ ಗುಂಪಿನಿಂದ ಹೊರಹೋಗಿ ಎಂದು ಗ್ರೂಪ್ ಅಡ್ಮಿನ್ ಆದೇಶಿಸಿದರು ಎಂದು ಇಟ್ಟುಕೊಳ್ಳೋಣ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಇಬ್ಲೀಸ್ ಗುಂಪಿನಿಂದ ಹೊರಹೋಗಲಿಲ್ಲ ಎಂದು ಆತನನ್ನು ಗ್ರೂಪ್ ಅಡ್ಮಿನ್ ರಿಮೂವ್ ಮಾಡಿದರೆ ಅದರಲ್ಲಿ ಏನು ಅರ್ಥ ಇರುತ್ತದೆ, ಹಾಗೆಯೇ ಇಲ್ಲಿಯೂ!!)

ಮಲಕು(ٱلْمَلَٰٓئِكَةُ)ಗಳಿಗೆ ಆದಮರ ಮುಂದೆ ಸಾಷ್ಟಾಂಗ ವೆರಗಲು ಆದೇಶ ನೀಡಿ(ಕುರಾನ್ 15:28-31) ಮಲಕ್ ಅಲ್ಲದ (ಜಿನ್ ಪಂಗಡದ) ಇಬ್ಲೀಸ್ ಸಾಷ್ಟಾಂಗವೆರಗಲಿಲ್ಲವೆಂದು ಅವನನ್ನು ಶಿಕ್ಷಿಸಿದಾಗಲೇ ಇಬ್ಲೀಸ್ ತಿರುಗಿ ನಿಂತು ದೇವರಿಗೆ ಕೊಶ್ಚನ್ ಕೇಳುವ ಆಯತನ್ನಾಗಿದೆ. ಇಬ್ಲೀಸಿನ ಆರೋಪವನ್ನು ನಿರಾಕರಿಸುವ ಬದಲು ದೇವರು, ಮನುಷ್ಯರನ್ನೆಲ್ಲಾ ನೀನು ದಾರಿ ತಪ್ಪಿಸಬಹುದು ಎಂಬ ಆತನ ಡಿಮಾಂಡಿಗೆ ದೇವರು okay ಎನ್ನುತ್ತಾನೆ!.(ನನ್ನ ನಿಷ್ಠಾವಂತ ದಾಸರನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ನೀನು ದಾರಿ ತಪ್ಪಿಸಬಹುದೆಂದು)

ಹೀಗೆ ದೇವರಿಂದ ‘ವರ’ ಪಡೆದ ಇಬ್ಲೀಸ್, ಅಂದಿನಿಂದ ಇಂದಿನವರೆಗೂ ಎಲ್ಲರನ್ನೂ ದಾರಿಗೆಡಿಸುತ್ತಿದ್ದಾನೆ!

ಈ ವಾಗ್ವಾದಗಳ ನಂತರ ಇಬ್ಲೀಸನನ್ನು ಸ್ವರ್ಗದಿಂದ ಹೊರಹಾಕಲಾಗುತ್ತದೆ. ಅದು ನಮಗೆಲ್ಲರಿಗೂ ಗೊತ್ತಿದೆ.(ಕುರಾನ್ 15:34)

ಹೀಗೆ ಸ್ವರ್ಗದಿಂದ ಹೊರದಬ್ಬಲ್ಪಟ್ಟ ಆತ ,ಮತ್ತೆ ಸ್ವರ್ಗಕ್ಕೆ ಹೋಗಿ ಅಲ್ಲಿದ್ದ ಆದಂ ಮತ್ತು ಅವ್ವರಿಗೆ ಆಪಲ್ ತಿನ್ನಿಸಿ ಅವರನ್ನು ಹೇಗೆ ದಾರಿ ತಪ್ಪಿಸಲು ಸಾಧ್ಯವಾಯಿತು? ದೇವರೇ ಆತನನ್ನು ಸ್ವರ್ಗದಿಂದ ಹೊರ ಹಾಕಿದ ಮೇಲೆ ಆತ ಮತ್ತೊಮ್ಮೆ ಸ್ವರ್ಗಕ್ಕೆ ರೀ ಎಂಟ್ರಿ ಹೇಗೆ ಮಾಡಿದ?

ಆದಮ್ _ಅವ್ವರನ್ನು ಸ್ವರ್ಗದಿಂದ ಹೊರ ಹಾಕಿದ್ದು ಇಬ್ಲೀಸ್ ಹೌದಾ? ಹದೀಸುಗಳನ್ನು ನೋಡಿದರೆ, ಆದಮ್ ರನ್ನು ಸೃಷ್ಟಿಸುವುದಕ್ಕೆ 40 ವರ್ಷಗಳಿಗೆ ಮೊದಲೇ ಆದಮರನ್ನು ಸ್ವರ್ಗದಿಂದ ಹೊರಹಾಕುವ ಪ್ಲಾನ್ ಗಳ ಬಗ್ಗೆ ಅಲ್ಲಾಹನು ನಿರ್ಧರಿಸಿದ್ದ ಎಂದು ಸಹೀ ಮುಸ್ಲಿಂ 2652a ಮೊದಲಾದ ಹಲವು ಅಧಿಕೃತ ಹದೀಸ್ ಗಳಲ್ಲಿ ಕಾಣಬಹುದಾಗಿದೆ! ಹಾಗೆ ನೋಡಿದಾಗ ಇಬ್ಲೀಸ್ ಸಹ ನಿರಪರಾಧಿಯಾಗಿ ಕಾಣುತ್ತಾನೆ! ಯಾಕೆಂದರೆ ಆದಮರನ್ನು ಸೃಷ್ಟಿಸುವುದಕ್ಕೆ 40 ವರ್ಷ ಮೊದಲೇ ಪೂರ್ವ ನಿರ್ಧರಿತವಾಗಿದ್ದ ಒಂದು ಘಟನೆಗೆ ಈತ ಹೇಗೆ ಹೊಣೆಯಾಗುತ್ತಾನೆ ?ಕೇವಲ ನಿಮಿತ್ತ ಮಾತ್ರ.

ಯಾವುದು ಸತ್ಯವೋ ಅದು ಎಲ್ಲಾ ತರ್ಕಗಳಿಂದ ಸರ್ವೈವ್ ಆಗಿ ಉಳಿದುಕೊಳ್ಳುತ್ತದೆ. ಯಾವುದು ಸುಳ್ಳಿನಿಂದ ಕೂಡಿದೆಯೋ ಅದು ಪರಸ್ಪರ ವಿರೋಧಾಭಾಸಗಳಿಂದ ಅತಾರ್ಕಿಕ ಸುಳಿಯಲ್ಲಿ ಸಿಕ್ಕು ಸತ್ತು ಹೋಗುತ್ತದೆ. ಈಗ ಇಸ್ಲಾಮಿನ ಸ್ಥಿತಿ ಆಗಿರುವುದೂ ಇದೆ.
ವಿಚಾರವಂತ ಮುಸಲ್ಮಾನರೆ ಇಸ್ಲಾಮ್ ತೊರೆದು ಹೊರಬನ್ನಿ….

– Exmuslims of karnataka

Loading

Similar Posts

  • ಕುರಾನ್ ಹುಟ್ಟಿದ ಕಥೆ 1

    ಕುರಾನ್ – ಅರೇಬಿಕ್ ಪದಗಳ ಶಬ್ದ ನಿಷ್ಪತ್ತಿ [ ಶಬ್ದಾರ್ಥ ಮೂಲ ] ಮತ್ತು ಕುರಾನಿನ ಸಂಯೋಜನೆ. ಕುರಾನ್ ಎಂಬ ಪದ ಬಂದದ್ದೆಲ್ಲಿಂದ ? ಅದರ ಅರ್ಥವೇನು ? ಕುರಾನಿನ ಮೂಲ ಪುಸ್ತಕ ಲೋಹದ ಹಾಳೆಗಳ ಸಹಿತ ಅಲ್ಲಾಹು ಹೊಲಿದು ಮೇಲೆ ಇಟ್ಟುಕೊಂಡಿದ್ದಾನಂತೆ ! ಅದನ್ನು ಲಾಹುಲ್ ಮಹ್ಫುಝ್-Lawh al-Mahfuz(اللوح المحفوظ) ಎಂದು ಕರೆಯಲಾಗಿದೆ.(ಕು 85:22) ಆ ಪುಸ್ತಕದಲ್ಲಿ ಕುರಾನಿನ ಆಯತುಗಳನ್ನು ಬರೆದಿಟ್ಟು ಆ ಲೇಖನಿಯು ವಿಶ್ರಾಂತಿಗೆ ಹೋಗಿದೆಯಂತೆ! ಕುರಾನಿನ ಅರ್ಥ “ಪಠಿಸು” : ಅಂದರೆ ಇಂಗ್ಲೀಷಿನಲ್ಲಿ…

  • ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 2

    ಕುರಾನಿನಲ್ಲಿರುವ ದ್ವಂದ್ವಗಳು, ವೈರುಧ್ಯಗಳು, ವಿರೋಧಾಭಾಸಗಳು, ತಪ್ಪುಗಳು ಮತ್ತು ಅತಾರ್ಕಿಕಕ ವಿಷಯಗಳನ್ನೆಲ್ಲಾ ತೆಗೆದು ಹಾಕಿದರೆ ಕುರಾನಿನಲ್ಲಿ ಏನು ಉಳಿದಿರುತ್ತದೆ ? ಬಹುಶಃ ಇವುಗಳ ಹೊರತಾಗಿ ಕುರಾನೇ ಇರುವುದಿಲ್ಲ. ಏಕೆಂದರೆ ಇವೆಲ್ಲವುಗಳಿಂದ ತುಂಬಿರುವುದೇ ಕುರಾನ್. ಅಲ್ಲಾಹನ ಹೊರತಾಗಿ ಬೇರೆ ಯಾವ ನ್ಯಾಯಾಧೀಶನಾಗಲಿ, ತೀರ್ಪುಗಾರನಾಗಲಿ ಇಲ್ಲ ಮತ್ತು ಆತ ತನ್ನ ನಿರ್ಧಾರ ಅಥವಾ ಆಡಳಿತದಲ್ಲಿ ಯಾರನ್ನೂ ಪಾಲುದಾರಾನನ್ನಾಗಿ ಮಾಡಲು ಅವನು ಅನುಮತಿಸುವುದಿಲ್ಲ ಎಂದು ಕುರಾನ್ ಈ ಆಯತುಗಳಲ್ಲಿ ಹೇಳುತ್ತದೆ; ಅಲ್ ಅನ್‌ಆಮ್(6).114—‘‘ಅವನು (ಅಲ್ಲಾಹನು) ಸವಿಸ್ತಾರವಾದ ಗ್ರಂಥವನ್ನು ನಿಮ್ಮೆಡೆಗೆ ಇಳಿಸಿಕೊಟ್ಟಿರುವಾಗ, ನಾನೇನು ಅಲ್ಲಾಹನನ್ನು…

  • ಕುರಾನಿನ ತರ್ಕಶೂನ್ಯ ಆಯತುಗಳು.

    ಕುರಾನ್ ಆಯತುಗಳು ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲ. ಒಂದು ಕಡೆ; “ಕುರಾನ್ 16.98—ನೀವು ಕುರ್‌ಆನ್‌ಅನ್ನು ಓದುವಾಗ, ಶಪಿತ ಶೈತಾನನ ವಿರುದ್ಧ ಅಲ್ಲಾಹನ ರಕ್ಷಣೆಯನ್ನು ಬೇಡಿರಿ.” ಎಂದು ಹೇಳಿದರೆ ಅದರ ನಂತರದ ಆಯತ್ತಿನಲ್ಲೇ ಹೀಗೆ ಹೇಳುತ್ತದೆ; ಕುರಾನ್ 16.99—ವಿಶ್ವಾಸಿಗಳ ಮೇಲೆ ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಇಟ್ಟಿರುವವರ ಮೇಲೆ ಆತನಿಗೆ (ಶೈತಾನನಿಗೆ) ಖಂಡಿತ ಯಾವ ನಿಯಂತ್ರಣವೂ ಇಲ್ಲ. ಮೊಮಿನಗಳ ಮೇಲೆ ಶೈತಾನನ ಯಾವ ಆಟವೂ ನಡೆಯುವುದಿಲ್ಲ ಎಂದಾದ ಮೇಲೆ ಅವರು ಕುರಾನ್ ಓದುವ ಮೊದಲು ಅವನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುವ ಅವಶ್ಯಕತೆಯಾದರೂ…

  • ಕುರಾನ್ ಹುಟ್ಟಿದ ಕಥೆ; ಭಾಗ 2

    ಜನಪ್ರಿಯ ಇಸ್ಲಾಮೀ ಕಥಾನಕ ಮತ್ತು ಗರ್ವದಿಂದ ಹೇಳಿಕೊಳ್ಳುವ ಮಾತೆಂದರೆ: “ಕುರಾನ್ ಒಂದು ದೈವೀ ಪವಾಡ. ಕುರಾನಿನಂಥ ಪರಿಪೂರ್ಣವಾದ ಜೀವನ ಮಾರ್ಗದರ್ಶಕ ಪುಸ್ತಕ ಜಗತ್ತಿನಲ್ಲಿಯೇ ಇಲ್ಲ. ಕುರಾನ್ ನೇರವಾಗಿ ಅಲ್ಲಾಹುವಿನಿಂದ ಮಹಮ್ಮದ್ ಪ್ರವಾದಿಗಳಿಗೆ ಕಳಿಸಲ್ಪಟ್ಟ (ಅವತೀರ್ಣಗೊಂಡ) ಸಂದೇಶ ಮತ್ತು ಬೋಧನೆಗಳನ್ನು ಕ್ರೋಢೀಕರಿಸಿದ ಪುಸ್ತಕ. ಅದು ಅಂದಿನಿಂದ ಇಂದಿನವರೆಗೆ ಒಂದೇ ಒಂದು ಚುಕ್ಕೆಯೂ ಬದಲಾಗದೆ ಹಾಗೆಯೇ ಉಳಿದು ಬಂದಿರುವ ಮಹಿಮಾ ಪೂರ್ಣವಾದ ಪುಸ್ತಕ ; ಹಾಗಾಗಿಯೇ ಅದು ಬಹಳ ಪವಿತ್ರವಾದದ್ದು. ಎಂದಿಗೂ ಬದಲಾಗದಂಥ ಕುಂದಿಲ್ಲದ ಈ ಪುಸ್ತಕದ ರಕ್ಷಣೆಯ ಹೊಣೆಯನ್ನು…

  • |

    DEBUNKING OF “ಕುರಾನ್ ಭ್ರೂಣಶಾಸ್ತ್ರ “

    ಅಧ್ಯಾಯ 3: ಆಲಿ ಇಮ್ರಾನ್ (ಇಮ್ರಾನರ ಸಂತತಿ)ಸೂಕ್ತ : 7 “ಅವನೇ, ಈ ಗ್ರಂಥವನ್ನು ನಿಮಗೆ ಇಳಿಸಿಕೊಟ್ಟವನು. ಇದರಲ್ಲಿ ಖಚಿತ ವಚನಗಳಿವೆ – ಅವುಗಳೇ ಈ ಗ್ರಂಥದ ಸಾರ. ಇನ್ನು, ಇದರಲ್ಲಿ ಬಹು ಅರ್ಥದ ವಚನಗಳೂ ಇವೆ. ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು, ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ. ನಿಜವಾಗಿ, ಅವುಗಳ ಸರಿಯಾದ ವ್ಯಾಖ್ಯಾನವನ್ನು ಬಲ್ಲವನು ಅಲ್ಲಾಹನ ಹೊರತು…

  • | |

    ಸ್ವರ್ಗವೋ ? ಕಾಮಪಶುಗಳ ಕೊಟ್ಟಿಗೆಯೋ ?

    ಇಸ್ಲಾಮಿನ ಆರನೇ ಸ್ತಂಭವೊಂದಿದೆ. ಅದನ್ನು ಮೇಲಾಗಿ ಐದು ಉಳಿದ ಸ್ಥಂಭಗಳ ಜತೆಗೆ ಹೇಳಿಲ್ಲದೇ ಇದ್ದರೂ ಸಹಾ ಷರಿಯಾದ ಪುಸ್ತಕಗಳಲ್ಲಿ , ಜಿಹಾದ್ ಕುರಿತಾದ ಲೇಖನಗಳಲ್ಲಿ ಮತ್ತು ಖುದ್ದಾಗಿ ಕುರಾನ್ ನಲ್ಲಿ ಅಲ್ಲಾಹುವಿನ ಮೂಲಕ ಮತ್ತು ಹದೀಸುಗಳಲ್ಲಿ ಮಹಮ್ಮದನ ಬಾಯಿಂದಲೇ ಜಿಹಾದ್ ಮತ್ತು ನಿರಂತರ ಹೋರಾಟದ ಅವಶ್ಯಕತೆಯನ್ನು ಹಾಗೂ ಅದು ತಂದು ಕೊಡಬಹುದಾದ ಅಲ್ಲಾಹುವಿನ ಕೃಪೆಯ ಮಹಾಪೂರವನ್ನು ಒತ್ತಿ ಒತ್ತಿ ಹೇಳಲಾಗಿದೆ. ಎಲ್ಲಾ ಮತಾನುಯಾಯಿ ಮುಸ್ಲಿಮನಿಗೆ ಜಿಹಾದ್ ಕಡ್ಡಾಯ [ ಅಂಗವಿಕಲರ ಹೊರತು ] ಇಂತಹ “ಪವಿತ್ರ ”…

Leave a Reply

Your email address will not be published. Required fields are marked *