|

ಶರಿಯಾ; ದೈವೀಕ ಕಾನೂನು

ಅಪರಾಧಿಗಳ ಕೈಕಾಲು, ತಲೆಗಳನ್ನು ಕತ್ತರಿಸುವಂತ ಶರಿಯಾ ಕಾನೂನು ಸೌದಿ ಅರೇಬಿಯಾದಲ್ಲಿ ಜಾರಿಯಲ್ಲಿದೆ. ಅಪಾರಾಧಿಗಳನ್ನು ಇಂತಕ ಶಿಕ್ಷೆಗೆ ಒಳಪಡಿಸುವ ಹೃದಯ ವಿದ್ರಾವಕ ಘಟನೆಗಳನ್ನು ಸೌದಿ ರಾಜವಂಶದ ಮಹಿಳೆ ತನ್ನ “desert royal” ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾಳೆ.

ಅಪರಾಧಿಗಳ ಕೈಕಾ’ಲು ತಲೆಗಳನ್ನು ಕಡಿಯುವುದಕ್ಕೆ ಒಬ್ಬ ನುರಿತ ತಲೆ ಕಡಿಯುವವನನ್ನು(swordsman) ಆಯ್ಕೆ ಮಾಡಿರುತ್ತಾರೆ. ಆತನ ಹೆಸರೇ “ಸಯೀದ್ ಅಲ್ ಸಯಾಫ್(saeed al sayaf)” ಈತನಿಗೆ ಸೌದಿ ಸರಕಾರವೇ ಸೂಕ್ತ ಶಿಕ್ಷಣ, ತರಬೇತಿ, ಹರಿತವಾದ ಖಡ್ಗ ನೀಡಿ ಸಹಾಯ ಮಾಡುತ್ತದೆ.

ಈತನೋ ಎಷ್ಟು ನಿರ್ಧಯಿಯಾಗಿದ್ದನೆಂದರೆ ಅಪರಾಧಿಗಳ ತಲೆ ಕೈಕಾಲುಗಳನ್ನು ಅತ್ಯಂತ ಚಾಕಚಕ್ಯತೆಯಿಂದ, ದಕ್ಷತೆಯಿಂದ ಕಿಚಿತ್ತು ಅಂಜದೆ ನೆರೆವೆರಿಸುತಿದ್ದ. ಈತನೇ ಸೌದಿಯ ಒಂದು ಮಾಧ್ಯಮದಲ್ಲಿ ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾನೆ. ಈತ ತನ್ನ ಕಾರ್ಯವಧಿಯಲ್ಲಿ 600 ತಲೆಗಳನ್ನು 60 ಕೈಗಳನ್ನು ಕಡಿದು ಹಾಕಿದ್ದ. ಅವನ ಕಾರ್ಯವೈಖರಿಯನ್ನು ಮೆಚ್ಚಿ ಸೌದಿ ರಾಜಕುಮಾರ ಅವನಿಗೆ ಒಂದು ಬಲಿಷ್ಠ ಹಾಗೂ ಹರಿತವಾದ ಕತ್ತಿಯನ್ನು ನೀಡಿದ್ದ.

ನಿವೃತ್ತಿಯ ನಂತರ ಆತ ತನ್ನ ಮಗನಿಗೆ ತನ್ನ ತಲೆ ಕಡಿಯುವ ವೃತ್ತಿಯನ್ನು ನೀಡುವ ಸಲುವಾಗಿ ಸೂಕ್ತ ಅಭ್ಯಾಸ ಮಾಡಿಸುತಿದ್ದ. ಒಮ್ಮೆ ಸಯಾಫ್ ಇಬ್ಬರು ಅಪರಾಧಿಗಳ ತಲೆ ಕಡಿಯಬೇಕಾಗಿತ್ತು. ಈ ಕಾರ್ಯಕ್ಕಾಗಿ ತನ್ನ ಕತ್ತಿಯನ್ನು ಪರೀಕ್ಷೆ ಮಾಡುತ್ತಾ ಕುಳಿತಿರುವಾಗ. ಇಬ್ಬರು ಅಪರಾಧಿಗಳು ಭಯದಿಂದ ತಮ್ಮ ಅಂತ್ಯವನ್ನೇ ಕಾದು ಕುಳಿತಿರುವಾಗ ಒಮ್ಮೆಲೇ ಒಬ್ಬ ಅಪರಾಧಿಯನ್ನು ಹಿಡಿದು ಒಂದೇ ಏಟಿಗೆ ಅವನ ತಲೆಯನ್ನು ಎರಡು ತುಂಡು ಮಾಡಿಬಿಟ್ಟ. ತುಂಡಾದ ತಲೆ ಬಳಿಯಲ್ಲೇ ಕುಳಿತಿದ್ದ ಇನ್ನೊಬ್ಬ ಅಪರಾಧಿಯ ಮೇಲೆ ಬಿದ್ದಾಗ ಆತ ಗಾಬರಿಯಿಂದ ಮೂರ್ಛೆ ಹೋದ. ಎಚ್ಚರಗೊಂಡ ನಂತರ ಅವನು ಕಣ್ಣೀರುಗರೆದು ನನ್ನನ್ನು ಕ್ಷಮಿಸು ಎಂದು ಗೂಗರೆದ, ಅರಚಾಡಿದ ಆದರೆ ಸಯಾಫ್ ನಗುನಗುತ್ತಲೇ ಅವನ ತಲೆ ಕಡಿದು ಉರುಳಿಸಿದ. (Desert royal p187-189)

ಹೇಗಿದೆ ರಕ್ತದಾಹಿ ದೈವಿಕ ಕಾನೂನು ?

ನಮ್ಮಲ್ಲಿ ಕೆಲವರು ಇದ್ದಾರೇ ಜೀವಪರವಾದಿಗಳು, ಮಾನವತಾವಾದಿಗಳು, ಬುದ್ಧಿಜೀವಿಗಳು ಇವರ ವಾದ ಏನೆಂದರೆ ನ್ಯಾಯಾಲಯಗಳು ಗಲ್ಲು ಶಿಕ್ಷೆಗೆ ಕೊಡುವುದು ತಪ್ಪು. ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಜೀವಾವಧಿಯ ಶಿಕ್ಷೆಯ ಹೊರತಾಗಿ ಜೀವ ತೆಗೆಯುವ ಗಲ್ಲು ಶಿಕ್ಷೆಗೆ ಯಾರಿಗೂ ಕೊಡಬಾರದು. ಆದರೆ ಶರಿಯಾ ಕಾನೂನಿನ ಇಂತಹ ಅಮಾನುಷ ಶಿಕ್ಷೆಗಳ ಕುರಿತು ನಿಮ್ಮ ಅಭಿಪ್ರಾಯ ಏನು ? ಎಂದು ಕೇಳಿದರೆ ಅವರ ಬಾಯಿ ಬಿದ್ದು ಹೋಗುತ್ತದೆ.

Similar Posts

  • ಅಮಾನವೀಯ ಪದ್ಧತಿ!

    ಮಕ್ಕಳ ಶಿಶ್ನದ ತುದಿ ಕತ್ತರಿಸುವ ಅಮಾನವೀಯ ಪದ್ಧತಿಯನ್ನು ನಿಷೇಧಿಸಬೇಕು. ಮಕ್ಕಳ ಮೇಲಿನ ದೈಹಿಕ, ಮಾನಸಿಕ ಹಿಂಸೆ ನಿಲ್ಲಬೇಕು. ಮಾನವ ಹಕ್ಕುಗಳ ಆಯೋಗ ನಿಜಕ್ಕೂ ಸತ್ತು ಹೋಗಿದೆ.ಈ ಸೆಮೆಟಿಕ್ ಮೌಢ್ಯದ ಕುರಿತು ಧ್ವನಿ ಎತ್ತಲು ಅದು ಹೆದರುತ್ತಿದೆ. ಮಕ್ಕಳ ರಕ್ಷಣೆಗೆಂದೇ ಸ್ಥಾಪಿತವಾಗಿರುವ ಹಲವಾರು ಸಂಘ, ಸಂಸ್ಥೆಗಳೂ ನಿರ್ವೀರ್ಯವಾಗಿವೆ. ಒಂದು ಕಾಲದಲ್ಲಿ ಆಜ್ಟೆಕ್ ಜನರು ಜೀವಂತವಾಗಿರುವ ವ್ಯಕ್ತಿಯ ಹೃದಯವನ್ನೇ ಹೊರತೆಗೆದು ದೇವರಿಗೆ ಅರ್ಪಿಸುತ್ತಿದ್ದರು. ಇಂತಹ ಕ್ರೂರ ಆಚರಣೆಗಳು ವಿವಿಧ ಮತಗಳಲ್ಲಿ ವಿವಿಧ ರೂಪಗಳಲ್ಲಿ ಈಗಲೂ ಜಾರಿಯಲ್ಲಿವೆ. ಇಸ್ಲಾಮಿನಲ್ಲಿ ಅದು ಸುನ್ನತ್ತಿನ…

  • | |

    ಹಾಸ್ಯಸ್ಪದ ಅಹಾದೀಸ್; ಕುದುರೆಯ ಲದ್ದಿ-ಜನ್ನತ್ತಿನ ಸಿದ್ಧಿ!

    ಕುದುರೆ ಲದ್ದಿ – ಜನ್ನತ್ತಿನ ಸಿದ್ಧಿ! ಅಧ್ಯಾಯ 45: ಜಿಹಾದಿಗೆಂದು ಕುದುರೆ ಸಾಕುವುದರ ಶ್ರೇಷ್ಠತೆಯನ್ನು ಕುರಿತಾದ ಹದೀಸು ಸಹೀ ಅಲ್ ಬುಕಾರಿ: ಅಂತರರಾಷ್ಟ್ರೀಯ ಹದೀಸ್ ಸಂಖ್ಯೆ 2853, ಅಬು ಹುರೈರಾ ವರದಿ ಮಾಡುತ್ತಾನೆ” ಯಾರೇ ಆಗಲಿ, ಜಿಹಾದಿಗೆಂದು ಕುದುರೆಯನ್ನು ಸಾಕಿದ್ದೇ ಆದರೆ, ಅಲ್ಲಾಹುವಿನ ಮೇಲಿನ ವಿಶ್ವಾಸದಿಂದ ಪ್ರೇರಿತನಾಗಿ ಜಿಹಾದಿಗೆಂದು ಕುದುರೆಯನ್ನು ಸಲಹಿಕೊಂಡಿದ್ದೇ ಆದರೆ ಕಯಾಮತ್ತಿನ ನ್ಯಾಯ ನಿರ್ಣಯ ದಿನದಂದು ಅಲ್ಲಾಹು ಆ ಕುದುರೆಯ ಮಾಲೀಕನಿಗೆ ಬಹುವಿಧದದಲ್ಲಿ ಬಹುಮಾನ ರೂಪವಾಗಿ ಆತನ ಖಾತೆಗೆ ಕೃಪಾಂಕಗಳನ್ನು ಹಾಕಿ ಭೋಗ ಭಾಗ್ಯಗಳನ್ನು…

  • ಮುಂದೊಗಲು ಮತ್ತು ಇಸ್ಲಾಮಿನ ಮೌಢ್ಯ!

    ನಾವೆಲ್ಲ ಜನಿಸಿದ್ದೆ ನಮ್ಮ ಹೆತ್ತವರ ಸಕ್ಸೆಸ್ಫುಲ್ ಲೈಂಗಿಕ ಜೀವನ ಫಲವಾಗಿ ಆದರೂ ನಮ್ಮಲ್ಲಿ ಲೈಂಗಿಕ ವಿಚಾರವಾಗಿ ಮಾತನಾಡುವುದು ಸಮಾಜ ಬಾಹೀರ ಕೃತ್ಯ ಎನ್ನುವಂತೆ ಕಾಣುತ್ತೇವೆ. ಹೆಚ್ಚಿನ ಮತಗಳು ಲೈಂಗಿಕತೆ ಒಂದು ಪಾಪ ಎನ್ನುವಂತೆ ಕಾಣುತ್ತದೆ. ಸೈತಾನನ ಮಾತು ಕೇಳಿ ಸ್ವರ್ಗದಿಂದ ಭೂಮಿಗೆ ಕುಸಿದ ಪಾಪದ ಫಲವೇ ಲೈಂಗಿಕತೆ, ಅದರ ಫಲವಾಗಿ ಹೆಣ್ಣು ನೋವಿನ ಪ್ರಸವವನ್ನು ಅನುಭವಿಸುತ್ತಾಳೆ ಅನ್ನುವ ಬೇರೆ ಬೇರೆ ವರ್ಷನ್ ಕಥೆಗಳು ಇವೆ. ಲೈಂಗಿಕತೆಯ ಬಗ್ಗೆ ಓಪನ್ ಆಗಿ ಮಾತನಾಡುವುದು ಬಿಡಿ, ಲೈಂಗಿಕ ಸಮಸ್ಯೆಗಳನ್ನು ಹೇಳಿಕೊಳ್ಳುವುದು…

  • |

    ಹದೀಸುಗಳ ಅಸಲಿ ಕಥೆ

    ಮುಸ್ಲಿಮರು ಕುರಾನಿನ ನಂತರ ಅತಿ ಹೆಚ್ಚು ಪವಿತ್ರತೆ ನೀಡಿ ಗೌರವಿಸುವ ಗ್ರಂಥಗಳೆಂದರೆ ಹದೀಸ್ ಗ್ರಂಥಗಳು. ತನ್ಮೂಲಕ ಕುರಾನ್ ಒಂದು ಸಮಗ್ರ ಮತ್ತು ಸಂಪೂರ್ಣ ಗ್ರಂಥವಲ್ಲ ಎಂಬುದನ್ನು ಮುಸ್ಲಿಮರು ಇಲ್ಲಿ ಒಪ್ಪದೆಯೇ ಒಪ್ಪಿಕೊಳ್ಳುತ್ತಾರೆ! ಆದರೆ ನಿಮಗೆ ಗೊತ್ತೇ, ಹದೀಸ್ ಗಳನ್ನು ಬರೆದಿಡಬಾರದೆಂದು ಪ್ರವಾದಿ ಮೊಹಮ್ಮದರ ಆದೇಶವಿರುವ ಹದೀಸ್ ಇದೆ!!! ಕುರಾನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ಬರೆದಿಡಬಾರದು ಮತ್ತು ಹಾಗೆ ಯಾರಾದರೂ ಬರೆದಿಟ್ಟಿದ್ದರೆ ಅದನ್ನು ಈ ಕೂಡಲೇ ಅಳಿಸಿ ಹಾಕಬೇಕೆಂದು ಪ್ರವಾದಿ ಹೇಳಿದ್ದಾರೆ.(ಸಹಿ-ಮುಸ್ಲಿಂ.3004) ಆದರೆ ಇದನ್ನು ಮೀರಿ ಬರೆದಿಡಲಾಗಿರುವ ಹದೀಸ್…

  • |

    ನಯವಂಚನೆಯ ನವ ರೂಪಗಳು; 2.ತವ್ರಿಯಾ

    2] ತವ್ರಿಯಾ (ತೌರಿಯಾ) ಇದಕ್ಕೆ ಸಮೀಪವಾದ ಇಂಗ್ಲೀಷಿನ ನುಡಿಗಟ್ಟು Dog whistle ಎನ್ನಬಹುದು. ಮುಸ್ಲಿಮನು ಕೊಡುವ ಹೇಳಿಕೆ ಅಥವಾ ವಾಕ್ಯಕ್ಕೆ ಮೇಲಿನ ಅರ್ಥವೇ ಬೇರೆ ; ಅವರ ಒಳಾರ್ಥವೇ ಬೇರೆ ಇರುತ್ತದೆ. ತನ್ನ ಜನರಿಗೆ ತನ್ನ ಮಾತಿನ ಒಳಾರ್ಥ ತಿಳಿದಿರಬೇಕು ; ಕಾಫಿರ ಜನಕ್ಕೆ ಅವರ ಸುಳಿವೂ ಸಹಾ ಸಿಕ್ಕಿರದಂತೆ ಮಾತಿನ ವರಸೆಯನ್ನು ಹೆಣೆಯಲಾಗುತ್ತದೆ. ಮಾತು ಟೆಕ್ನಿಕಲ್ಲಿ ಸರಿಯಾಗಿರುತ್ತದೆ; ಆದರೆ ನೈತಿಕವಾಗಿ ದಾರಿತಪ್ಪಿಸಿರುತ್ತದೆ. ರಚನಾತ್ಮಕವಾಗಿ ಅಸ್ಪಷ್ಟತೆಯ ಸುಳ್ಳನ್ನು ಸತ್ಯದ ಟೆಕ್ನಿಕಲ್ ಆವರಣದೊ ಳಗಿಟ್ಟು ವಂಚಿಸುವ ಸಂಚು ಎನ್ನಬಹುದು….

  • ನಯವಂಚನೆಯ ನವ ರೂಪಗಳು; 1. ತಖಿಯಾ

    ನಯವಂಚನೆಯ ನವ ರೂಪಗಳು: ಮನುಷ್ಯ ಮನುಷ್ಯ ಎಂಬುದನ್ನಷ್ಟೇ ನೋಡಬೇಕು. ಮಾನವೀಯತೆಯ ಮುಂದೆ ಯಾವುದೂ ಇಲ್ಲ. ಆದರೆ ಇಸ್ಲಾಮ್ ಮಾನವೀಯ ಸಮಾಜದಲ್ಲಿ ಹೇಗೆ ಅಡ್ಡಗೋಡೆಯಾಗುತ್ತದೆ ಎನ್ನುವ ಕರಾಳ ಸತ್ಯವನ್ನು ತಿಳಿದುಕೊಳ್ಳಬೇಕಾ ? ಹಾಗಾದರೆ ಬನ್ನಿ; 1] ತಕ್ಕಯ್ಯಾ (ತಖಿಯಾ) :ತಕ್ಕಯ್ಯಾ ಅಥವಾ ತಖಿಯಾ ಎಂದರೆ ಒಬ್ಬ ಮುಸ್ಲಿಮನು ತನ್ನ ಮೂಲ ಸ್ವಭಾವವನ್ನು ಉದ್ದೇಶ ಪೂರ್ವಕವಾಗಿ ಮರೆಮಾಚಿ ಇತರರೊಂದಿಗೆ ಅವರಿರುವಂತೆ ಇರುವ ಮತ್ತು ಆಮೂಲಕ ನಂಬಿಸುವ ತಂತ್ರ! ಇದು ಬಹಳ ವ್ಯಾಪಕವಾಗಿ ಬಳಕೆಯಲ್ಲಿರುವ ಪದ ಮಾತ್ರವಲ್ಲ; ಮುಸಲ್ಮಾನರು ವ್ಯಾಪಕವಾಗಿ ಬಳಸುವ…

Leave a Reply

Your email address will not be published. Required fields are marked *