ಕುರಾನಿನಿಂದ ಮರೆಯಾದ ಆಯತ್ತುಗಳು!

ಕುರಾನ್ ಇಸ್ಲಾಮಿನ ಅತ್ಯಂತ ಪ್ರಾಮಾಣಿಕ ಆಧಾರ.  ಅದು ಯಾರ ಹಸ್ತಕ್ಷೇಪಕ್ಕೂ ಒಳಗಾಗಿಲ್ಲ. ಅದು ಎಂದೂ ಬದಲಾಗಿಲ್ಲ. ಅದರಲ್ಲಿ ಒಂದು ಅಕ್ಷರವೂ ಬದಲಾಗದೆ ಉಳಿದುಬಂದಿದೆ ಎನ್ನುವ ತಪ್ಪು ಕಲ್ಪನೆ ಮುಸ್ಲಿಮರಲ್ಲಿದೇ. ಇದು ಸುಳ್ಳು.

ವಿವಾಹಿತ ವ್ಯಬಿಚಾರಿಗಳನ್ನು  ಕಲ್ಲೆಸೆದು ಕೊಲ್ಲಬೇಕೆಂಬ ಆಯತ್ ಇಂದಿನ ಕುರಾನಿನಲ್ಲಿ ಇಲ್ಲ. (ಇಂದಿನ ಕುರಾನಿನಲ್ಲಿ ವ್ಯಭಿಚಾರಿಗಳಿಗೆ ಬೇರೆಯೇ ಶಿಕ್ಷೆ ಇದೆ. ಕ್ಷಮೆ ನೀಡಲೂ ಅವಕಾಶವಿದೆ!)
ಹಾಗೆಯೇ, ಅನ್ಯ ಪುರುಷರನ್ನು ಮಹರಂ ಮಾಡಲು ಅವರಿಗೆ ಹತ್ತು ಬಾರಿ ಸ್ತನಪಾನ ಮಾಡಿಸಬೇಕೆಂಬ ಆಯತ್ ಕೂಡ ಇಂದಿನ ಕುರಾನಿನಲ್ಲಿ ಇಲ್ಲ. (ಸ್ತನಪಾನದ ಬಗ್ಗೆ ನನ್ನ ಹಿಂದಿನ ಪೋಸ್ಟ್ ನೋಡಿ)
ಆದರೆ ಅಂದಿನ ಕುರಾನಿನಲ್ಲಿ ವ್ಯಭಿಚಾರಿಗಳನ್ನು ಕಲ್ಲೆಸೆದು ಕೊಲ್ಲಬೇಕೆಂಬ ಆಯತ್ ಇದ್ದಿರಲೇಬೇಕು.(ಇತ್ತೆಂದು ಹೇಳಿರುವುದು ನಾವಲ್ಲ; ಪ್ರವಾದಿ  ಪತ್ನಿಯೂ ಉಮಾತುಲ್ ಮೂಮಿನೀನ್  ಆಯಿಷಾ ರವರಾಗಿದ್ದಾರೆ. ಅದನ್ನು ಉಲ್ಲೇಖಿಸಿರುವುದು ಇಮಾಮ್ ಮುಸ್ಲಿಂ, ಇಮಾಮ ಬುಕಾರಿ, ಇಮಾಮ ಇಬ್ನ್ ಮಾಜಾ ರಂತಹ ಶ್ರೇಷ್ಠ ವಿದ್ವಾಂಸರಾಗಿದ್ದಾರೆ )

ಯಾಕೆಂದರೆ ಪ್ರವಾದಿಯವರು ವ್ಯಭಿಚಾರಿಗಳನ್ನು ಖುದ್ದು ಕಲ್ಲೆಸೆದು ಕೊಲ್ಲಿಸಿದ್ದರು. (ಬುಕಾರಿ 5270 ,2314, 2315 , ಸಹಿ ಮುಸ್ಲಿಂ 1695 b)* *ಮತ್ತು ಕಲ್ಲು  ಎಸೆದು ಕೊಲ್ಲುವಂತೆ (ಕಿತಾಬುಲ್ಲಾ-ಅಲ್ಲಾಹನ ಗ್ರಂಥದ ಆಧಾರದಲ್ಲಿ) ತೀರ್ಪು ಸಹ ನೀಡಿದ್ದರು.( ಸಹಿ ಬುಖಾರಿ 2695,2696 )

ಅಂದು ಅಂತಹ ಆಯತ್ ಇರದೇ, ಪ್ರವಾದಿಯವರು ಹದ್ದು ಮೀರಿ ಇಂತಹ ಕ್ರೂರ ಶಿಕ್ಷೆ ನೀಡಿದರೆಂದು ಯಾರೂ ವಾದಿಸಲು ಸಾಧ್ಯವಿಲ್ಲ.
ತಾನು ವ್ಯಬಿಚಾರ ಮಾಡಿದ್ದೇನೆ ಎಂದು ಖುದ್ದು ನಾಲ್ಕು ಬಾರಿ ಆಣೆ ಹಾಕಿ ಹೇಳಿದ ವ್ಯಕ್ತಿಯನ್ನು ಸಹ ಕಲ್ಲೆಸೆದು ಕೊಲ್ಲುವಂತೆ ಆದೇಶಿಸಿದ್ದರು ರಹ್ಮತುಲ್ ಆಲಮೀನ್ ಆದ ಪ್ರವಾದಿಯವರು! ( ಸಹಿ ಬುಕಾರಿ 6814)

ಇಬ್ನ್ ಮಾಜ -1944 ಹದೀಸ್, ಸಹಿ ಮುಸ್ಲಿಂ 1691a, ಸಹಿ ಮುಸ್ಲಿಂ 1452a ಮೊದಲಾದ  ಅಧಿಕೃತ ಹದೀಸಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ- ಅಂದು ಕಲ್ಲೆಸೆದು ಕೊಲ್ಲಿಸುವ ಮತ್ತು 10 ಬಾರಿ ಸ್ಥನಪಾನದ ಆಯತ್ತು ಇತ್ತೆಂದು .
ಪ್ರವಾದಿಯವರು ಮರಣ ಹೊಂದಿದ ಸಂದರ್ಭದಲ್ಲಿ ಎಲ್ಲರೂ ಅದರಲ್ಲಿ ಕಾರ್ಯನಿರತವಾಗಿರುವಾಗ ಯಾವುದೋ ಬೀದಿ ಕುರಿಯೊಂದು ಬಂದು

ಆಯಿಷಾ ರವರ ತಲೆದಿಂಬಿನ ಕೆಳಗೆ ಇಡಲಾಗಿದ್ದ ಆ ಆಯತನ್ನು ತಿಂದು ಹಾಕಿತೆಂದೂ ಆಯಿಷರವರು ವರದಿ ಮಾಡಿದ್ದಾರೆ ( ಸುನನ್ ಇಬ್ನ್ ಮಾಜ 1944)

ಇವೆಲ್ಲವೂ ಮುತಫಕ್ಕುನ್ ಅಲೆಹಿ (ಅಂದರೆ ಇಸ್ಲಾಮಿನ ‘ಸಿಯಾವು-ಸಿತ್ತ’ ಎಂಬ ಆರು ಅಧಿಕೃತ ಹದೀಸ್ ಪಂಡಿತರಲ್ಲಿ ಬಹುತೇಕ ಪಂಡಿತರೂ ಒಪ್ಪಿರುವಂತಹ   ಹದೀಸ್ ಗಳು) ಹದೀಸ್ ಗಳಾಗಿವೆ. ಇವುಗಳನ್ನು ತಿರಸ್ಕರಿಸಲು ಇತರೆ ಇರುವ ಮಾನದಂಡಗಳೂ ಇಲ್ಲ.

ಕುರಾನ್ ನಲ್ಲಿ ಈ ಆಯತ್ ಗಳು ಇಲ್ಲವೆಂಬುದೂ ಕೂಡ ಈಗ ಮಾನದಂಡವಾಗುವುದಿಲ್ಲ. ಯಾಕೆಂದರೆ
ಕೇವಲ ಕುರಾನ್ ಇಟ್ಟುಕೊಂಡೇ ಧರ್ಮವನ್ನು ಆಚರಿಸುವುದು ಅಸಾಧ್ಯವೆ ಸರಿ, ನಾವು ಇಂದು ನಿರ್ವಹಿಸುತ್ತಿರುವ ಐದು ಬಾರಿಯ ನಮಾಜ್ ಮಾಡಬೇಕೆಂಬುದು ಕೂಡ ಕುರಾನಿನ ಯಾವುದೇ ಸಿಂಗಲ್ ಆಯತಿನಲ್ಲಿ ಇಲ್ಲ. ಗರಿಷ್ಠ ಮೂರು ಬಾರಿ ನಮಾಜ್ ಮಾಡಬೇಕೆಂಬ ಆಯತ್ ಸಿಗಬಹುದಷ್ಟೇ. ಅಥವಾ ನಮಾಜ್ ಮಾಡಬೇಕಾದ ರೀತಿ ನೀತಿಗಳನ್ನು ಕೂಡ ಕುರಾನ್ ಎಲ್ಲಿಯೂ ಹೇಳಿಲ್ಲ.
ಇಸ್ಲಾಮಿನ ಪ್ರದೇಶ ದ್ವಾರವಾದ ಶಹಾಧ ಕಲಿಮ ಕೂಡ ಕುರಾನಿನಲ್ಲಿಲ್ಲ. ಮುಂಜಿ ಮಾಡಬೇಕೆಂದು ಇಲ್ಲ .ಗಡ್ಡ ಬಿಡಬೇಕೆಂದೂ ಮೀಸೆ ಮುಂಡನ ಮಾಡಬೇಕೆಂದೂ ಕುರಾನಿನಲ್ಲಿ ಇಲ್ಲ !ಅಜರುಲ್ ಅಸ್ವಧ್ ಕಪ್ಪು ಕಲ್ಲಿನ ಬಗ್ಗೆ ಕುರಾನಿನಲ್ಲಿ ಇಲ್ಲ .ಝಂ ಝಂ ತೀರ್ಥ ಜಲದ ಬಗ್ಗೆ ಪ್ರಸ್ತಾಪವಿಲ್ಲ. ಕಬರ್ ಶಿಕ್ಷೆ (ಗೋರಿಯೊಳಗಿನ ಪ್ರಶ್ನೋತ್ತರಗಳು) ಕುರಾನಿನಲ್ಲಿ ಇಲ್ಲ. ನಮಾಜ್ ಪೂರ್ವದ ಅಜಾನ್ ಸಹ ಕುರಾನಿನಲ್ಲಿಲ್ಲ!
ಅಲ್ಲೆಲ್ಲಾ ನಾವು ಸಂಪೂರ್ಣವಾಗಿ ಹದೀಸ್ ಗಳನ್ನು ಅವಲಂಬಿಸಿದ್ದೇವೆ.

Exmuslims of Karnataka

Similar Posts

  • ಗುಹಾಂತರದ ಕಥಾಂತರ; ಗುಡಿಸಿ ಗುಂಡಾಂತರ ಮಾಡಿದ ಕುರಾನ್.

    ಗುಹೆಯ ಗೆಳೆಯರ ನಿದ್ರೆ, ಗಂಡಾಗುಂಡಿ ಕುರಾನ್ ಮುದ್ರೆ: ಕಬ್ಜಾ ಮಾಡುವುದರಲ್ಲಿ ಕುರಾನ್ ಎತ್ತಿದ ಕೈ ಎಂದು ಈಗಾಗಲೇ ಹಲವು ಉದಾಹರಣೆಗಳನ್ನು ನೋಡಿಬಿಟ್ಟಿದ್ದೇವೆ. ಆದರೂ ಮೊಮಿನರು ತಮ್ಮ ಈ ಸೌದಿಯ ದೋ ನಂಬ್ರಿ ಮತವು ಕಬ್ಜಾ ಮಾಡಿದ ಕೌದಿ ಎಂಬುದನ್ನು ನಂಬುವುದಕ್ಕೆ ಸಿದ್ಧರೇ ಇಲ್ಲ. ಹಾಗಾಗಿ ಈಗ 2 ಅಥವಾ ಮೂರನೇ ಶತಮಾನದ ಕ್ರೈಸ್ತರ ಕಥೆಯೊಂದನ್ನು ಅಲ್ಲಾಹ ಮತ್ತು ಆತನ ಬಂದಾ ಮಹಮ್ಮದ್ ಹೇಗೆ ಕಬ್ಜಾ ಮಾಡಿ ಕುರಾನಿಗೆ ಸೇರಿಸಿದ್ದಾರೆ ಎಂಬುದನ್ನು ನೋಡೋಣ. ಕುರಾನಿನಲ್ಲಿ ಈ ಕಥೆ 18ನೇ…

  • ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 2

    ಕುರಾನಿನಲ್ಲಿರುವ ದ್ವಂದ್ವಗಳು, ವೈರುಧ್ಯಗಳು, ವಿರೋಧಾಭಾಸಗಳು, ತಪ್ಪುಗಳು ಮತ್ತು ಅತಾರ್ಕಿಕಕ ವಿಷಯಗಳನ್ನೆಲ್ಲಾ ತೆಗೆದು ಹಾಕಿದರೆ ಕುರಾನಿನಲ್ಲಿ ಏನು ಉಳಿದಿರುತ್ತದೆ ? ಬಹುಶಃ ಇವುಗಳ ಹೊರತಾಗಿ ಕುರಾನೇ ಇರುವುದಿಲ್ಲ. ಏಕೆಂದರೆ ಇವೆಲ್ಲವುಗಳಿಂದ ತುಂಬಿರುವುದೇ ಕುರಾನ್. ಅಲ್ಲಾಹನ ಹೊರತಾಗಿ ಬೇರೆ ಯಾವ ನ್ಯಾಯಾಧೀಶನಾಗಲಿ, ತೀರ್ಪುಗಾರನಾಗಲಿ ಇಲ್ಲ ಮತ್ತು ಆತ ತನ್ನ ನಿರ್ಧಾರ ಅಥವಾ ಆಡಳಿತದಲ್ಲಿ ಯಾರನ್ನೂ ಪಾಲುದಾರಾನನ್ನಾಗಿ ಮಾಡಲು ಅವನು ಅನುಮತಿಸುವುದಿಲ್ಲ ಎಂದು ಕುರಾನ್ ಈ ಆಯತುಗಳಲ್ಲಿ ಹೇಳುತ್ತದೆ; ಅಲ್ ಅನ್‌ಆಮ್(6).114—‘‘ಅವನು (ಅಲ್ಲಾಹನು) ಸವಿಸ್ತಾರವಾದ ಗ್ರಂಥವನ್ನು ನಿಮ್ಮೆಡೆಗೆ ಇಳಿಸಿಕೊಟ್ಟಿರುವಾಗ, ನಾನೇನು ಅಲ್ಲಾಹನನ್ನು…

  • ಕುರಾನ್ 2.223 ರ ವ್ಯಾಖ್ಯಾನ

    ವಿಗ್ರಹಾರಾಧಕರಾಗಿದ್ದ ಅನ್ಸಾರ್‌ಗಳು(ಮದೀನಾದ ಪೈಗಂಬರ್ ಅನುಯಾಯಿಗಳು) ಮತ್ತು ಅಹ್ಲುಲ್‌ ಕಿತಾಬ್‌ಗಳಾದ ಯಹೂದರು ಜೊತೆಯಾಗಿ ಮದಿನಾದಲ್ಲಿ ವಾಸಿಸುತ್ತಿದ್ದರು. ಯಹೂದರು ತಮಗಿಂತ ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆಂದು ಅನ್ಸಾರ್‌ಗಳು ನಂಬಿದ್ದರು. ಹಾಗಾಗಿ ಅವರ ಅನೇಕ ಆಚಾರ ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು. ಯಹೂದಿಯರ ಪ್ರಕಾರ ಪತ್ನಿಯರನ್ನು ಅವಳ ಯೋನಿಗೆ ಅವಳ ಹಿಂಭಾಗದಿಂದ(dogy style ನಲ್ಲಿ) ಸಂಭೋಗಿಸಿದರೆ ಮೆಳ್ಳೆಗಣ್ಣಿನ ಮಗು ಹುಟ್ಟುತ್ತದೆ ಎಂಬ ನಂಬಿಕೆ ಹೊಂದಿದ್ದರು. ಹಾಗಾಗಿ ಒಂದು ಕೋನದಿಂದ ಮಾತ್ರ ಸಂಭೋಗಿಸುತಿದ್ದರು. ಅಂದರೆ ಆಕೆಯನ್ನು ಅಂಗಾತಮಲಗಿಸಿ ಆಕೆಯನ್ನು ಸಂಪೂರ್ಣ ಮರೆಮಾಚುವ ವಿಧದಲ್ಲಿ ಆಕೆಯ ಮೇಲೆ…

  • ಕುರಾನ್ ಹುಟ್ಟಿದ ಕಥೆ; ಭಾಗ 2

    ಜನಪ್ರಿಯ ಇಸ್ಲಾಮೀ ಕಥಾನಕ ಮತ್ತು ಗರ್ವದಿಂದ ಹೇಳಿಕೊಳ್ಳುವ ಮಾತೆಂದರೆ: “ಕುರಾನ್ ಒಂದು ದೈವೀ ಪವಾಡ. ಕುರಾನಿನಂಥ ಪರಿಪೂರ್ಣವಾದ ಜೀವನ ಮಾರ್ಗದರ್ಶಕ ಪುಸ್ತಕ ಜಗತ್ತಿನಲ್ಲಿಯೇ ಇಲ್ಲ. ಕುರಾನ್ ನೇರವಾಗಿ ಅಲ್ಲಾಹುವಿನಿಂದ ಮಹಮ್ಮದ್ ಪ್ರವಾದಿಗಳಿಗೆ ಕಳಿಸಲ್ಪಟ್ಟ (ಅವತೀರ್ಣಗೊಂಡ) ಸಂದೇಶ ಮತ್ತು ಬೋಧನೆಗಳನ್ನು ಕ್ರೋಢೀಕರಿಸಿದ ಪುಸ್ತಕ. ಅದು ಅಂದಿನಿಂದ ಇಂದಿನವರೆಗೆ ಒಂದೇ ಒಂದು ಚುಕ್ಕೆಯೂ ಬದಲಾಗದೆ ಹಾಗೆಯೇ ಉಳಿದು ಬಂದಿರುವ ಮಹಿಮಾ ಪೂರ್ಣವಾದ ಪುಸ್ತಕ ; ಹಾಗಾಗಿಯೇ ಅದು ಬಹಳ ಪವಿತ್ರವಾದದ್ದು. ಎಂದಿಗೂ ಬದಲಾಗದಂಥ ಕುಂದಿಲ್ಲದ ಈ ಪುಸ್ತಕದ ರಕ್ಷಣೆಯ ಹೊಣೆಯನ್ನು…

  • ಕುರಾನ್ ಹುಟ್ಟಿದ ಕಥೆ 1

    ಕುರಾನ್ – ಅರೇಬಿಕ್ ಪದಗಳ ಶಬ್ದ ನಿಷ್ಪತ್ತಿ [ ಶಬ್ದಾರ್ಥ ಮೂಲ ] ಮತ್ತು ಕುರಾನಿನ ಸಂಯೋಜನೆ. ಕುರಾನ್ ಎಂಬ ಪದ ಬಂದದ್ದೆಲ್ಲಿಂದ ? ಅದರ ಅರ್ಥವೇನು ? ಕುರಾನಿನ ಮೂಲ ಪುಸ್ತಕ ಲೋಹದ ಹಾಳೆಗಳ ಸಹಿತ ಅಲ್ಲಾಹು ಹೊಲಿದು ಮೇಲೆ ಇಟ್ಟುಕೊಂಡಿದ್ದಾನಂತೆ ! ಅದನ್ನು ಲಾಹುಲ್ ಮಹ್ಫುಝ್-Lawh al-Mahfuz(اللوح المحفوظ) ಎಂದು ಕರೆಯಲಾಗಿದೆ.(ಕು 85:22) ಆ ಪುಸ್ತಕದಲ್ಲಿ ಕುರಾನಿನ ಆಯತುಗಳನ್ನು ಬರೆದಿಟ್ಟು ಆ ಲೇಖನಿಯು ವಿಶ್ರಾಂತಿಗೆ ಹೋಗಿದೆಯಂತೆ! ಕುರಾನಿನ ಅರ್ಥ “ಪಠಿಸು” : ಅಂದರೆ ಇಂಗ್ಲೀಷಿನಲ್ಲಿ…

  • ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 1

    ನರಕವಾಸಿಗಳ ಆಹಾರವೇನು ? ಕುರಾನ್ ಯಾವ ರೀತಿಯ ಪವಿತ್ರ ಪುಸ್ತಕ ಎಂದು ನನಗೆ ತಿಳಿಯುತ್ತಿಲ್ಲ. ಅದರ ಬೋಧನೆಗಳಲ್ಲೇ ಪರಸ್ಪರ ವಿರೋಧಾಭಾಸಗಳು, ಗೊಂದಲಗಳು, ಅಂತರ್ವಿರೋಧಗಳು, ತಪ್ಪುಗಳು, ತೊಡಕುಗಳಿವೆ. ಕುರಾನ್ ನರಕವಾಸಿಗಳ ಆಹಾರದ ಕುರಿತಾಗಿ ಒಂದು ಕಡೆ ಹೀಗೆ ಹೇಳುತ್ತದೆ: ಅಲ್ ಗಾಶಿಯಾ(88).6- ಲೈಸ ಲಹುಮ್ ತ’ಅಮುನ್ ಇಲ್ಲಾ ಮಿನ್ ದರೀ’——ಮುಳ್ಳಿನ ಗಿಡದ ಹೊರತು ಬೇರೆ ಯಾವ ಆಹಾರವೂ ಅವರಿಗೆ(ನರಕವಾಸಿಗಳಿಗೆ) ಸಿಗದು. ಈ ಆಯತಿನಲ್ಲಿ ಹೇಳಿರುವಂತೆ ನರಕವಾಸಿಗಳ ಆಹಾರ “ಕೇವಲ ಮುಳ್ಳಿನ ಗಿಡ ಮಾತ್ರ”. ಇದರ ಹೊರತು ಮತ್ಯಾವ ಆಹಾರವೂ…

Leave a Reply

Your email address will not be published. Required fields are marked *