ಅಲ್ಲಾಹನಿಂದ ಮೋಸಹೋದ ಇಬ್ಲೀಸನ ಕಥೆ(ಕುರಾನ್ 15.39)

ಕುರಾನ್.15:39 ರ ಈ ಆಯತ್ , ಸರ್ವಶಕ್ತನಾದ ಅಲ್ಲಾಹನ ಮುಖಾಮುಖಿಯಾಗಿ ನಿಂತ ಕ್ಷುಲ್ಲಕ ಜೀವಿಯಾದ ಇಬ್ಲೀಸ್, ಸೃಷ್ಟಿಕರ್ತನಾದ ದೇವರ ವಿರುದ್ಧವೇ ನೇರ ಆರೋಪ ಮಾಡುತ್ತಿರುವ ಆಯತಾಗಿದೆ! ಮತ್ತು ಕುರಾನಿನ 6236 ಆಯತ್ ಗಳಲ್ಲಿ ಎಲ್ಲಿಯೂ ಕೂಡ ದೇವರು ,ಇಬ್ಲೀಸ್ ಮಾಡಿದ ಈ ಗಂಭೀರ ಆರೋಪವನ್ನು ನಿರಾಕರಿಸಿಲ್ಲ ಎಂಬುದು ಗಮನಾರ್ಹವಾಗಿದೆ!!

ಇಬ್ಲೀಸ್ ಅಲ್ಲಾಹನಿಗೆ ಹೇಳಿರುವುದು “قَالَ رَبِّ بِمَآ اَغْوَيْتَنِيْ—ನೀನು ನನ್ನನ್ನು *ದಾರಿಗೆಡಿಸಿರುವಂತೆಯೇ* (you have put me in error )ಎಂದಾಗಿದೆ. ಅಂದರೆ ಇಬ್ಲೀಸನನ್ನು ದಾರಿಗೆಡಿಸಿರುವುದು ಅಲ್ಲಾಹು ಎಂದು ಆತ ನೇರ ಆರೋಪ ಮಾಡುತ್ತಾನೆ. ಅಲ್ಲಾಹನು ಈ ಅಧ್ಯಾಯದಲ್ಲಿ ಆಗಲಿ, ಉಳಿದ ಅಧ್ಯಾಯಗಳಲ್ಲಾಗಲೀ “ನಿನ್ನನ್ನು ದಾರಿಗೆಡಿಸಿರುವುದು ನಾನಲ್ಲ” ಎಂದು ನಿರಾಕರಿಸಿದ ಒಂದೇ ಒಂದು ಆಯತ್ ಇಲ್ಲ!
ಬದಲಿಗೆ ಅಲ್ಲಾಹ ಬಹುದೊಡ್ಡ ಮೊಸಗಾರ ಎಂದು ಸ್ವತಃ ಕುರಾನ್ 3.54ರಲ್ಲಿ ಹೇಳಲಾಗಿದೆ.

ಹಾಗಾದರೆ ಇಲ್ಲಿ ಇಬ್ಲೀಸ್ ಮಾಡಿರುವ ಆರೋಪವೇನು ? ಅದರ ಹಿನ್ನೆಲೆ ಏನು, ನೋಡೋಣ.

ಅಲ್ಲಾಹನು ಆದಮರನ್ನು ಸೃಷ್ಟಿಸಿರುವುದು, ಆದಮರ ಮುಂದೆ ಸಾಷ್ಟಾಂಗವೆರಗಲು ಮಲಕುಗಳಿಗೆ ಸೂಚಿಸುವುದು ನಮಗೆಲ್ಲ ಗೊತ್ತಿದೆ.(ಯಾಕೆಂದರೆ ಈ ಒಂದು ಕಥೆಯೇ ಕುರಾನಿನಲ್ಲಿ ಸುಮಾರು 6-7 ಅಧ್ಯಾಯಗಳಲ್ಲಿ ಪುನರಾವರ್ತನೆಯಾಗಿದೆ) ಎಲ್ಲಾ ಮಲಕುಗಳೂ ಸಾಷ್ಟಾಂಗವೆರಗುತ್ತಾರೆ, ಇಬ್ಲೀಸ್ ಒಬ್ಬನನ್ನು ಹೊರತುಪಡಿಸಿ. ಯಾಕೆಂದರೆ ಇಬ್ಲೀಸ್ ಮಲಕ್ ಅಲ್ಲ; ಆತ ಜಿನ್ ವರ್ಗಕ್ಕೆ ಸೇರಿದವನಾಗಿದ್ದಾನೆ (ಕುರಾನ್ 18:50).
(ಉದಾಹರಣೆಗೆ,ಆರೋಗ್ಯ ಇಲಾಖೆಗೆ ಸೇರಿದ ಸದಸ್ಯರೆಲ್ಲರೂ ಈ ಗುಂಪಿನಿಂದ ಹೊರಹೋಗಿ ಎಂದು ಗ್ರೂಪ್ ಅಡ್ಮಿನ್ ಆದೇಶಿಸಿದರು ಎಂದು ಇಟ್ಟುಕೊಳ್ಳೋಣ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಇಬ್ಲೀಸ್ ಗುಂಪಿನಿಂದ ಹೊರಹೋಗಲಿಲ್ಲ ಎಂದು ಆತನನ್ನು ಗ್ರೂಪ್ ಅಡ್ಮಿನ್ ರಿಮೂವ್ ಮಾಡಿದರೆ ಅದರಲ್ಲಿ ಏನು ಅರ್ಥ ಇರುತ್ತದೆ, ಹಾಗೆಯೇ ಇಲ್ಲಿಯೂ!!)

ಮಲಕು(ٱلْمَلَٰٓئِكَةُ)ಗಳಿಗೆ ಆದಮರ ಮುಂದೆ ಸಾಷ್ಟಾಂಗ ವೆರಗಲು ಆದೇಶ ನೀಡಿ(ಕುರಾನ್ 15:28-31) ಮಲಕ್ ಅಲ್ಲದ (ಜಿನ್ ಪಂಗಡದ) ಇಬ್ಲೀಸ್ ಸಾಷ್ಟಾಂಗವೆರಗಲಿಲ್ಲವೆಂದು ಅವನನ್ನು ಶಿಕ್ಷಿಸಿದಾಗಲೇ ಇಬ್ಲೀಸ್ ತಿರುಗಿ ನಿಂತು ದೇವರಿಗೆ ಕೊಶ್ಚನ್ ಕೇಳುವ ಆಯತನ್ನಾಗಿದೆ. ಇಬ್ಲೀಸಿನ ಆರೋಪವನ್ನು ನಿರಾಕರಿಸುವ ಬದಲು ದೇವರು, ಮನುಷ್ಯರನ್ನೆಲ್ಲಾ ನೀನು ದಾರಿ ತಪ್ಪಿಸಬಹುದು ಎಂಬ ಆತನ ಡಿಮಾಂಡಿಗೆ ದೇವರು okay ಎನ್ನುತ್ತಾನೆ!.(ನನ್ನ ನಿಷ್ಠಾವಂತ ದಾಸರನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ನೀನು ದಾರಿ ತಪ್ಪಿಸಬಹುದೆಂದು)

ಹೀಗೆ ದೇವರಿಂದ ‘ವರ’ ಪಡೆದ ಇಬ್ಲೀಸ್, ಅಂದಿನಿಂದ ಇಂದಿನವರೆಗೂ ಎಲ್ಲರನ್ನೂ ದಾರಿಗೆಡಿಸುತ್ತಿದ್ದಾನೆ!

ಈ ವಾಗ್ವಾದಗಳ ನಂತರ ಇಬ್ಲೀಸನನ್ನು ಸ್ವರ್ಗದಿಂದ ಹೊರಹಾಕಲಾಗುತ್ತದೆ. ಅದು ನಮಗೆಲ್ಲರಿಗೂ ಗೊತ್ತಿದೆ.(ಕುರಾನ್ 15:34)

ಹೀಗೆ ಸ್ವರ್ಗದಿಂದ ಹೊರದಬ್ಬಲ್ಪಟ್ಟ ಆತ ,ಮತ್ತೆ ಸ್ವರ್ಗಕ್ಕೆ ಹೋಗಿ ಅಲ್ಲಿದ್ದ ಆದಂ ಮತ್ತು ಅವ್ವರಿಗೆ ಆಪಲ್ ತಿನ್ನಿಸಿ ಅವರನ್ನು ಹೇಗೆ ದಾರಿ ತಪ್ಪಿಸಲು ಸಾಧ್ಯವಾಯಿತು? ದೇವರೇ ಆತನನ್ನು ಸ್ವರ್ಗದಿಂದ ಹೊರ ಹಾಕಿದ ಮೇಲೆ ಆತ ಮತ್ತೊಮ್ಮೆ ಸ್ವರ್ಗಕ್ಕೆ ರೀ ಎಂಟ್ರಿ ಹೇಗೆ ಮಾಡಿದ?

ಆದಮ್ _ಅವ್ವರನ್ನು ಸ್ವರ್ಗದಿಂದ ಹೊರ ಹಾಕಿದ್ದು ಇಬ್ಲೀಸ್ ಹೌದಾ? ಹದೀಸುಗಳನ್ನು ನೋಡಿದರೆ, ಆದಮ್ ರನ್ನು ಸೃಷ್ಟಿಸುವುದಕ್ಕೆ 40 ವರ್ಷಗಳಿಗೆ ಮೊದಲೇ ಆದಮರನ್ನು ಸ್ವರ್ಗದಿಂದ ಹೊರಹಾಕುವ ಪ್ಲಾನ್ ಗಳ ಬಗ್ಗೆ ಅಲ್ಲಾಹನು ನಿರ್ಧರಿಸಿದ್ದ ಎಂದು ಸಹೀ ಮುಸ್ಲಿಂ 2652a ಮೊದಲಾದ ಹಲವು ಅಧಿಕೃತ ಹದೀಸ್ ಗಳಲ್ಲಿ ಕಾಣಬಹುದಾಗಿದೆ! ಹಾಗೆ ನೋಡಿದಾಗ ಇಬ್ಲೀಸ್ ಸಹ ನಿರಪರಾಧಿಯಾಗಿ ಕಾಣುತ್ತಾನೆ! ಯಾಕೆಂದರೆ ಆದಮರನ್ನು ಸೃಷ್ಟಿಸುವುದಕ್ಕೆ 40 ವರ್ಷ ಮೊದಲೇ ಪೂರ್ವ ನಿರ್ಧರಿತವಾಗಿದ್ದ ಒಂದು ಘಟನೆಗೆ ಈತ ಹೇಗೆ ಹೊಣೆಯಾಗುತ್ತಾನೆ ?ಕೇವಲ ನಿಮಿತ್ತ ಮಾತ್ರ.

ಯಾವುದು ಸತ್ಯವೋ ಅದು ಎಲ್ಲಾ ತರ್ಕಗಳಿಂದ ಸರ್ವೈವ್ ಆಗಿ ಉಳಿದುಕೊಳ್ಳುತ್ತದೆ. ಯಾವುದು ಸುಳ್ಳಿನಿಂದ ಕೂಡಿದೆಯೋ ಅದು ಪರಸ್ಪರ ವಿರೋಧಾಭಾಸಗಳಿಂದ ಅತಾರ್ಕಿಕ ಸುಳಿಯಲ್ಲಿ ಸಿಕ್ಕು ಸತ್ತು ಹೋಗುತ್ತದೆ. ಈಗ ಇಸ್ಲಾಮಿನ ಸ್ಥಿತಿ ಆಗಿರುವುದೂ ಇದೆ.
ವಿಚಾರವಂತ ಮುಸಲ್ಮಾನರೆ ಇಸ್ಲಾಮ್ ತೊರೆದು ಹೊರಬನ್ನಿ….

– Exmuslims of karnataka

Loading

Similar Posts

  • ಕುರಾನಿನಿಂದ ಮರೆಯಾದ ಆಯತ್ತುಗಳು!

    ಕುರಾನ್ ಇಸ್ಲಾಮಿನ ಅತ್ಯಂತ ಪ್ರಾಮಾಣಿಕ ಆಧಾರ.  ಅದು ಯಾರ ಹಸ್ತಕ್ಷೇಪಕ್ಕೂ ಒಳಗಾಗಿಲ್ಲ. ಅದು ಎಂದೂ ಬದಲಾಗಿಲ್ಲ. ಅದರಲ್ಲಿ ಒಂದು ಅಕ್ಷರವೂ ಬದಲಾಗದೆ ಉಳಿದುಬಂದಿದೆ ಎನ್ನುವ ತಪ್ಪು ಕಲ್ಪನೆ ಮುಸ್ಲಿಮರಲ್ಲಿದೇ. ಇದು ಸುಳ್ಳು. ವಿವಾಹಿತ ವ್ಯಬಿಚಾರಿಗಳನ್ನು  ಕಲ್ಲೆಸೆದು ಕೊಲ್ಲಬೇಕೆಂಬ ಆಯತ್ ಇಂದಿನ ಕುರಾನಿನಲ್ಲಿ ಇಲ್ಲ. (ಇಂದಿನ ಕುರಾನಿನಲ್ಲಿ ವ್ಯಭಿಚಾರಿಗಳಿಗೆ ಬೇರೆಯೇ ಶಿಕ್ಷೆ ಇದೆ. ಕ್ಷಮೆ ನೀಡಲೂ ಅವಕಾಶವಿದೆ!)ಹಾಗೆಯೇ, ಅನ್ಯ ಪುರುಷರನ್ನು ಮಹರಂ ಮಾಡಲು ಅವರಿಗೆ ಹತ್ತು ಬಾರಿ ಸ್ತನಪಾನ ಮಾಡಿಸಬೇಕೆಂಬ ಆಯತ್ ಕೂಡ ಇಂದಿನ ಕುರಾನಿನಲ್ಲಿ ಇಲ್ಲ. (ಸ್ತನಪಾನದ…

  • ಗುಹಾಂತರದ ಕಥಾಂತರ; ಗುಡಿಸಿ ಗುಂಡಾಂತರ ಮಾಡಿದ ಕುರಾನ್.

    ಗುಹೆಯ ಗೆಳೆಯರ ನಿದ್ರೆ, ಗಂಡಾಗುಂಡಿ ಕುರಾನ್ ಮುದ್ರೆ: ಕಬ್ಜಾ ಮಾಡುವುದರಲ್ಲಿ ಕುರಾನ್ ಎತ್ತಿದ ಕೈ ಎಂದು ಈಗಾಗಲೇ ಹಲವು ಉದಾಹರಣೆಗಳನ್ನು ನೋಡಿಬಿಟ್ಟಿದ್ದೇವೆ. ಆದರೂ ಮೊಮಿನರು ತಮ್ಮ ಈ ಸೌದಿಯ ದೋ ನಂಬ್ರಿ ಮತವು ಕಬ್ಜಾ ಮಾಡಿದ ಕೌದಿ ಎಂಬುದನ್ನು ನಂಬುವುದಕ್ಕೆ ಸಿದ್ಧರೇ ಇಲ್ಲ. ಹಾಗಾಗಿ ಈಗ 2 ಅಥವಾ ಮೂರನೇ ಶತಮಾನದ ಕ್ರೈಸ್ತರ ಕಥೆಯೊಂದನ್ನು ಅಲ್ಲಾಹ ಮತ್ತು ಆತನ ಬಂದಾ ಮಹಮ್ಮದ್ ಹೇಗೆ ಕಬ್ಜಾ ಮಾಡಿ ಕುರಾನಿಗೆ ಸೇರಿಸಿದ್ದಾರೆ ಎಂಬುದನ್ನು ನೋಡೋಣ. ಕುರಾನಿನಲ್ಲಿ ಈ ಕಥೆ 18ನೇ…

  • ಕುರಾನ್ 2.223 ರ ವ್ಯಾಖ್ಯಾನ

    ವಿಗ್ರಹಾರಾಧಕರಾಗಿದ್ದ ಅನ್ಸಾರ್‌ಗಳು(ಮದೀನಾದ ಪೈಗಂಬರ್ ಅನುಯಾಯಿಗಳು) ಮತ್ತು ಅಹ್ಲುಲ್‌ ಕಿತಾಬ್‌ಗಳಾದ ಯಹೂದರು ಜೊತೆಯಾಗಿ ಮದಿನಾದಲ್ಲಿ ವಾಸಿಸುತ್ತಿದ್ದರು. ಯಹೂದರು ತಮಗಿಂತ ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆಂದು ಅನ್ಸಾರ್‌ಗಳು ನಂಬಿದ್ದರು. ಹಾಗಾಗಿ ಅವರ ಅನೇಕ ಆಚಾರ ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು. ಯಹೂದಿಯರ ಪ್ರಕಾರ ಪತ್ನಿಯರನ್ನು ಅವಳ ಯೋನಿಗೆ ಅವಳ ಹಿಂಭಾಗದಿಂದ(dogy style ನಲ್ಲಿ) ಸಂಭೋಗಿಸಿದರೆ ಮೆಳ್ಳೆಗಣ್ಣಿನ ಮಗು ಹುಟ್ಟುತ್ತದೆ ಎಂಬ ನಂಬಿಕೆ ಹೊಂದಿದ್ದರು. ಹಾಗಾಗಿ ಒಂದು ಕೋನದಿಂದ ಮಾತ್ರ ಸಂಭೋಗಿಸುತಿದ್ದರು. ಅಂದರೆ ಆಕೆಯನ್ನು ಅಂಗಾತಮಲಗಿಸಿ ಆಕೆಯನ್ನು ಸಂಪೂರ್ಣ ಮರೆಮಾಚುವ ವಿಧದಲ್ಲಿ ಆಕೆಯ ಮೇಲೆ…

  • ಕುರಾನಿನ ತರ್ಕಶೂನ್ಯ ಆಯತುಗಳು.

    ಕುರಾನ್ ಆಯತುಗಳು ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲ. ಒಂದು ಕಡೆ; “ಕುರಾನ್ 16.98—ನೀವು ಕುರ್‌ಆನ್‌ಅನ್ನು ಓದುವಾಗ, ಶಪಿತ ಶೈತಾನನ ವಿರುದ್ಧ ಅಲ್ಲಾಹನ ರಕ್ಷಣೆಯನ್ನು ಬೇಡಿರಿ.” ಎಂದು ಹೇಳಿದರೆ ಅದರ ನಂತರದ ಆಯತ್ತಿನಲ್ಲೇ ಹೀಗೆ ಹೇಳುತ್ತದೆ; ಕುರಾನ್ 16.99—ವಿಶ್ವಾಸಿಗಳ ಮೇಲೆ ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಇಟ್ಟಿರುವವರ ಮೇಲೆ ಆತನಿಗೆ (ಶೈತಾನನಿಗೆ) ಖಂಡಿತ ಯಾವ ನಿಯಂತ್ರಣವೂ ಇಲ್ಲ. ಮೊಮಿನಗಳ ಮೇಲೆ ಶೈತಾನನ ಯಾವ ಆಟವೂ ನಡೆಯುವುದಿಲ್ಲ ಎಂದಾದ ಮೇಲೆ ಅವರು ಕುರಾನ್ ಓದುವ ಮೊದಲು ಅವನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುವ ಅವಶ್ಯಕತೆಯಾದರೂ…

  • ಏಕ್ ಔರ್ ದಕ್ಕಾ, ಕುರಾನ್ ಫೇಲ್ ಪಕ್ಕಾ! [ಕುರಾನಿನ ಸುಳ್ಳು ಪ್ರತಿಪಾದನೆಗಳು]

    ಕುರಾನ್ ಆಗಲಿ ಅದರಿಂದ ಇಸ್ಲಾಮ್ ಆಗಲಿ ತನ್ನದು ಎನ್ನಬಹುದಾದ original- ಸೃಜನಾತ್ಮಕವಾದ ಶುದ್ಧ ಆಚಾರ ವಿಚಾರಗಳನ್ನು ಸೃಷ್ಟಿಸಿಯೇ ಇಲ್ಲ. ಎಲ್ಲವೂ ಅಲ್ಲಿಂದ ಇಲ್ಲಿಂದ ಆಯ್ದ ಬಟ್ಟೆಯ ಚೂರುಗಳನ್ನು ಸೇರಿಸಿ ಹೊಲಿದ ಕೌದಿಯ ರೂಪದಲ್ಲಿದೆ ಈ ಕುರಾನ್ ಮತ್ತು ಇಸ್ಲಾಮ್. ಹಾಗಾಗಿಯೇ ಇಸ್ಲಾಮನ್ನು bandaid religion ಎಂದೂ ಕರೆಯುವುದುಂಟು. ಒಡ್ಡಿದ ಪರೀಕ್ಷೆಯಲ್ಲಿ ಹಿನಾಯವಾಗಿ ಸೋಲುವ ದಡ್ಡವಿದ್ಯಾರ್ಥಿಯಂತಿದೆ ಇಸ್ಲಾಮ್. ತಾನು ಸೋತರೆ ಔಟ್ ಆದರೆ ಬಾಲ್ ಒಡೆದು, ವಿಕೆಟ್ ಮುರಿದು ಹಾಕುವಂಥ ದೌಷ್ಟ್ರ್ಯ ಇಲ್ಲಿರುತ್ತದೆ. ಈ ಹಿಂದೆ, ಇಸ್ಲಾಮಿನ ಮೂಲ…

  • | |

    ಸ್ವರ್ಗವೋ ? ಕಾಮಪಶುಗಳ ಕೊಟ್ಟಿಗೆಯೋ ?

    ಇಸ್ಲಾಮಿನ ಆರನೇ ಸ್ತಂಭವೊಂದಿದೆ. ಅದನ್ನು ಮೇಲಾಗಿ ಐದು ಉಳಿದ ಸ್ಥಂಭಗಳ ಜತೆಗೆ ಹೇಳಿಲ್ಲದೇ ಇದ್ದರೂ ಸಹಾ ಷರಿಯಾದ ಪುಸ್ತಕಗಳಲ್ಲಿ , ಜಿಹಾದ್ ಕುರಿತಾದ ಲೇಖನಗಳಲ್ಲಿ ಮತ್ತು ಖುದ್ದಾಗಿ ಕುರಾನ್ ನಲ್ಲಿ ಅಲ್ಲಾಹುವಿನ ಮೂಲಕ ಮತ್ತು ಹದೀಸುಗಳಲ್ಲಿ ಮಹಮ್ಮದನ ಬಾಯಿಂದಲೇ ಜಿಹಾದ್ ಮತ್ತು ನಿರಂತರ ಹೋರಾಟದ ಅವಶ್ಯಕತೆಯನ್ನು ಹಾಗೂ ಅದು ತಂದು ಕೊಡಬಹುದಾದ ಅಲ್ಲಾಹುವಿನ ಕೃಪೆಯ ಮಹಾಪೂರವನ್ನು ಒತ್ತಿ ಒತ್ತಿ ಹೇಳಲಾಗಿದೆ. ಎಲ್ಲಾ ಮತಾನುಯಾಯಿ ಮುಸ್ಲಿಮನಿಗೆ ಜಿಹಾದ್ ಕಡ್ಡಾಯ [ ಅಂಗವಿಕಲರ ಹೊರತು ] ಇಂತಹ “ಪವಿತ್ರ ”…

Leave a Reply

Your email address will not be published. Required fields are marked *